ADVERTISEMENT

ಒಪ್ಪಿಗೆ ಇಲ್ಲದೆ ಬಣ್ಣ ಹಾಕುವಂತಿಲ್ಲ: ಎಸ್‌.ಪಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 9:42 IST
Last Updated 17 ಮಾರ್ಚ್ 2014, 9:42 IST

ಬಾಗಲಕೋಟೆ: ಹೋಳಿ ಹಬ್ಬದ ಸಂದರ್ಭ­ದಲ್ಲಿ ಸಾರ್ವಜನಿಕರಿಗೆ ಒತ್ತಾಯ ಪೂರ್ವಕವಾಗಿ ಯಾರೂ ಬಣ್ಣ ಎರಚಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.

ವಿಶೇಷವಾಗಿ ಹೆಣ್ಣು ಮಕ್ಕಳ ಮೇಲೆ ಅವರ ಒಪ್ಪಿಗೆ ಇಲ್ಲದೆ ಬಣ್ಣ ಹಾಕಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ತಮಗೆ ತೊಂದರೆ ಆದಲ್ಲಿ ಅಥವಾ ಯಾವುದೇ ಮಾಹಿತಿ ನೀಡಲು ಬಾಗಲಕೋಟೆ ಪೊಲೀಸ್ ಕಂಟ್ರೋಲ್‌ ರೂಂ ದೂರವಾಣಿ 08354-235079ಕ್ಕೆ ಕರೆ ಮಾಡಬ­ಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಡಿಪಿಐ ಮನವಿ: ಜಿಲ್ಲೆಯಾದ್ಯಂತ ಇದೇ 17 ರಿಂದ ಹೋಳಿಹಬ್ಬ ಇರುವು­ದರಿಂದ ಈ ಸಂದರ್ಭದಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ವಾಹನ ಮತ್ತು ನಡೆದುಕೊಂಡು ಹೋಗುವಾಗ ಮುಕ್ತ ಅವಕಾಶ ನೀಡಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಎಂ. ಮಡಿವಾಳರ ತಿಳಿಸಿದ್ದಾರೆ. 

ಇದೇ 22ರ ವರೆಗೆ 8, 9ನೇ ತರಗತಿ ಹಾಗೂ  20 ರಿಂದ 26ರವರೆಗೆ ಪ್ರಾಥ­ಮಿಕ ಶಾಲೆಗಳಲ್ಲಿ ಮಕ್ಕಳ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆ­ಯಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಪರೀಕ್ಷಾ­ರ್ಥಿ­ಗಳಿಗೆ ಬಣ್ಣ ಎರಚುವುದು, ತೊಂದರೆ ಕೊಡಬಾ­ರದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.