ADVERTISEMENT

ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರ ಸಾವು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 20:09 IST
Last Updated 23 ಅಕ್ಟೋಬರ್ 2017, 20:09 IST

ಲೋಕಾಪುರ (ಬಾಗಲಕೋಟೆ ಜಿಲ್ಲೆ): ಸಮೀಪದ ಪೆಟ್ಲೂರ ತಾಂಡಾದ ಇಬ್ಬರು ಬಾಲಕರು, ಕೃಷಿ ಹೊಂಡದಲ್ಲಿ ಬಿದ್ದು ಸೋಮವಾರ ಮೃತಪಟ್ಟಿದ್ದಾರೆ.

ಸಂದೀಪ ನಿಂಗಪ್ಪ ಲಮಾಣಿ (14), ಮಂಜುನಾಥ ಬಾಬು ಲಮಾಣಿ (15) ಮೃತಪಟ್ಟ ಬಾಲಕರು.

ನೀರು ತರಲೆಂದು ಹೋಗಿದ್ದ ಸಂದೀಪ, ಕಾಲುಜಾರಿ ಕೃಷಿಹೊಂಡದಲ್ಲಿ ಬಿದ್ದಿದ್ದಾನೆ. ಆತನ ರಕ್ಷಣೆಗೆ ಧಾವಿಸಿ ಮಂಜುನಾಥ ಕೂಡ ಹೊಂಡಕ್ಕೆ ಇಳಿದಿದ್ದಾನೆ. ಆದರೆ ಮೇಲಕ್ಕೆ ಬರಲಾಗದೇ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.