ಹುನಗುಂದ: ತಾಲ್ಲೂಕಿನ ಇದ್ದಲಗಿ ಗ್ರಾಮ ಲೆಕ್ಕಾಧಿಕಾರಿ ಶಂಕರ ಲಮಾಣಿ ಸೋಮವಾರ ₹ 8 ಸಾವಿರ ಲಂಚ ಪಡೆಯುವಾಗ ಇಲ್ಲಿನ ಹಳೇ ತಹಶೀಲ್ದಾರ್ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಇದ್ದಲಗಿ ಗ್ರಾಮದ ಮಲ್ಲಿಕಾರ್ಜುನ ದೇವೇಂದ್ರಪ್ಪ ಗೌಡರ ಅವರ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ₹10 ಸಾವಿರ ಲಂಚ ಕೇಳಿದ್ದಾರೆ. ಗುರುವಾರ ₹2 ಸಾವಿರ ಪಡೆದಿದ್ದಾರೆ. ಉಳಿದ ಹಣ ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ದಾಳಿಯ ನೇತೃತ್ವವನ್ನು ಡಿಸಿಪಿ ವಿಜಯಕುಮಾರ ಬಿಸನಳ್ಳಿ, ಸಿ.ಐ.ಮಠಪತಿ, ಆರ್.ಹಳ್ಳೂರು ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.