ಬಾಗಲಕೋಟೆ: ಇಲ್ಲಿನ ರೂಪ್ಲ್ಯಾಂಡಿನ ಸಿದ್ಧಿವಿನಾಯಕ ದೇವಸ್ಥಾನದ ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ದೇವಸ್ಥಾನ ಸಮಿತಿ ಅಧ್ಯಕ್ಷ ವಾಲಿ ಅವರ ಅಧ್ಯಕ್ಷತೆಯಲ್ಲಿ ನಾಗರಿಕ ಸನ್ಮಾನ ನಡೆಸಲಾಯಿತು.
ದೇವಸ್ಥಾನಕ್ಕೆ 1 ಲಕ್ಷ ದಾನ ನೀಡಿದ್ದ ಮಲ್ಲೇಶಪ್ಪ ಜಿಗಜಿನ್ನಿ, ಪ್ರಕಾಶ್ ತಪಶೆಟ್ಟಿ, ಬಸವರಾಜ ಪಾಟೀಲ, ಎಂ.ಸಿ.ಸರನಾಯಕ, ಎಸ್.ಎಂ.ಚಿನವಾಲ ಅವರನ್ನು ಸನ್ಮಾನಿಸಲಾಯಿತು. ರೂಪ್ಲ್ಯಾಂಡಿನ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಸಂಗಪ್ಪ ಅಪ್ಪಣ್ಣಗೋಳ ಸ್ವಾಗತಿಸಿದರು. ಸಿ.ವಿ.ಪಾಟೀಲ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.