ADVERTISEMENT

Video ಶೂರ್ಪಾಲಿ: ಕೃಷ್ಣಾ ನದಿಯಲ್ಲಿ ಎಮ್ಮೆ ಹೊತ್ತೊಯ್ದ ಮೊಸಳೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 7:00 IST
Last Updated 1 ಏಪ್ರಿಲ್ 2021, 7:00 IST
   

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಶೂರ್ಪಾಲಿಯಲ್ಲಿ ಬುಧವಾರ ಕೃಷ್ಣಾ ನದಿಯಲ್ಲಿ ನೀರು ಕುಡಿಯಲು ಹೋದ ಎಮ್ಮೆಯನ್ನು ಮೊಸಳೆ ಹೊತ್ತೊಯ್ದಿದೆ. ಆ ವಿಡಿಯೊ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಮೊಸಳೆ ಎಮ್ಮೆಯನ್ನ ಹೊತ್ತೊಯ್ಯುತ್ತಿರುವ ದೃಶ್ಯವನ್ನು ಗ್ರಾಮಸ್ಥರೇ ಮೊಬೈಲ್ ಫೋನ್ ವಿಡಿಯೋ ಸೆರೆ ಹಿಡಿದಿದ್ದಾರೆ.

ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಘಟಪ್ರಭಾ ನದಿಗಳ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಮೊಸಳೆಗಳ ಹಾವಳಿ ಹೆಚ್ಚುತ್ತದೆ.

ADVERTISEMENT

ಈಗ ಮೊಸಳೆ ಎಮ್ಮೆಯನ್ನು ಹೊತ್ತೊಯ್ದಿರುವುದು ನದಿ ಪಾತ್ರದ ಶೂರ್ಪಾಲಿ, ಕಂಕನವಾಡಿ,ಮುತ್ತೂರು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.