ADVERTISEMENT

ಡಾ.ಗಂಗಾಲಗೆ 'ಆಯುರ್ವೇದ ವಿಶ್ವರತ್ನ' ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:57 IST
Last Updated 28 ಡಿಸೆಂಬರ್ 2025, 5:57 IST
ಡಾ.ಶಿವಕುಮಾರ ಗಂಗಾಲ
ಡಾ.ಶಿವಕುಮಾರ ಗಂಗಾಲ   

ಬಾಗಲಕೋಟೆ: ಇಲ್ಲಿನ ಎಂಆರ್ ಎನ್ ಆಯುರ್ವೆದ ಕಾಲೇಜಿನ ಶಲ್ಯತಂತ್ರ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ ಗಂಗಾಲ ಅವರಿಗೆ 'ಆಯುರ್ವೇದ ವಿಶ್ವರತ್ನ' ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಜೆ ಆಯುರ್ವೇದಿಕ್ ಫೌಂಡೇಶನ್ ವತಿಯಿಂದ ನಡೆದ ಎರಡನೇ ವಿಶ್ವ ಆಯುರ್ವೇದ ಸಮ್ಮೇಳನದಲ್ಲಿ ಅವರಿಗೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಆರ್ಯುವೇದ ಕ್ಷೇತ್ರದಲ್ಲಿ ಅವರು ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ ಎಂದು ವಿಶ್ವ ಆಯುರ್ವೇ ಸಮ್ಮೇಳನದ ಆಯೋಜಕ ಡಾ.ಗಿರಿಧರ್ ಕಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.