ADVERTISEMENT

ಬಾಗಲಕೋಟೆ: ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 4:39 IST
Last Updated 14 ಡಿಸೆಂಬರ್ 2020, 4:39 IST
ಕೆಎಸ್‌ಆರ್‌ಟಿಸಿ ಬಸ್‌
ಕೆಎಸ್‌ಆರ್‌ಟಿಸಿ ಬಸ್‌   

ಬಾಗಲಕೋಟೆ: ಇಲ್ಲಿನ ಹಳೆ ಬಸ್ ನಿಲ್ದಾಣದಿಂದ ಸೋಮವಾರ ಬೆಳಿಗ್ಗೆ ನಿಧಾನವಾಗಿ ಬಸ್ ಸಂಚಾರ ಆರಂಭವಾಗುತ್ತಿದೆ. ಪೊಲೀಸ್ ಭದ್ರತೆಯಲ್ಲಿ ಬಸ್ ಗಳು ಆರಂಭವಾದವು. ಜಮಖಂಡಿ, ಇಳಕಲ್ ಹಾಗೂ ಗದ್ದನಕೇರಿ ಕ್ರಾಸ್ ಗೆ ಬಸ್ ಗಳು ಓಡಾಟ ಆರಂಭಿಸಿದ್ದು, ಪ್ರಯಾಣಿಕರ ಸ್ಪಂದನೆಯೂ ಸಿಗುತ್ತಿದೆ.

ಜಿಲ್ಲಾಡಳಿತದ ಸೂಚನೆ ಮೇರೆಗೆ ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ.ಮೇತ್ರಿ ಬಸ್ ನಿಲ್ದಾಣಕ್ಕೆ ಬಂದು ಸಿಬ್ಬಂದಿಯ ಮನವೊಲಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕರ್ತವ್ಯಕ್ಕೆ ಮರಳಲು ಮುಂದಾಗಿರುವ ಸಿಬ್ಬಂದಿಗೆ ಶಹರ ಠಾಣೆ ಪೊಲೀಸರು ರಕ್ಷಣೆ ಒದಗಿಸಿದ್ದಾರೆ. ಅವರ ಬೆಂಗಾವಲಿನಲ್ಲಿಯೇ ಬಸ್ ಗಳು ಸಂಚಾರ ಆರಂಭಿಸಿದವು.

ಮಧ್ಯಾಹ್ನದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಬಸ್ ಗಳ ಸೇವೆ ಆರಂಭವಾಗಬಹುದು ಎಂದು ಮೇತ್ರಿ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.