ADVERTISEMENT

‘ಹಸಿರು ಹಳಿಂಗಳಿ’ ಅಭಿಯಾನಕ್ಕೆ ಚಾಲನೆ

ಸಸಿ ನೆಟ್ಟು ಪೋಷಿಸಲು ವಿದ್ಯಾರ್ಥಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 17:23 IST
Last Updated 15 ಜುಲೈ 2019, 17:23 IST
ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಅಹಿಂಸಾ ಪ್ರೌಢಶಾಲೆ ಆವರಣದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಇಕ್ರಂ ಅವರು ಸಸಿ ನೆಟ್ಟು, ನಿರುಣಿಸಿದರು
ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಅಹಿಂಸಾ ಪ್ರೌಢಶಾಲೆ ಆವರಣದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಇಕ್ರಂ ಅವರು ಸಸಿ ನೆಟ್ಟು, ನಿರುಣಿಸಿದರು   

ತೇರದಾಳ: ಮಕ್ಕಳು ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು, ಅವುಗಳನ್ನು ನಿರಂತರವಾಗಿ ಪೋಷಣೆ ಮಾಡಬೇಕು ಎಂದು ಎಂದು ಜಮಖಂಡಿ ಉಪವಿಭಾಗಾಧಿಕಾರಿ ಇಕ್ರಂ ಹೇಳಿದರು.

ಸಮೀಪದ ಹಳಿಂಗಳಿ ಗ್ರಾಮದ ಅಹಿಂಸಾ ಪ್ರೌಢಶಾಲೆಯ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಹಸಿರು ಹಳಿಂಗಳಿ, ಸ್ವಚ್ಛ ಹಳಿಂಗಳಿ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಸರ ಬೆಳೆಸಿ, ಉಳಿಸುವ ಅಭಿಯಾನಕ್ಕೆ ಶಾಲೆಯ ಮಕ್ಕಳಿಂದಲೇ ಚಾಲನೆ ನೀಡಲಾಗಿದೆ. ನಾಗರಿಕರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವುದು ಇದರ ಉದ್ದೇಶವಾಗಿದೆ. ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ರಸ್ತೆಬದಿಯ ಮರಗಳನ್ನು ಸಂರಕ್ಷಿಸಬೇಕು. ಜಲಮೂಲಗಳನ್ನು ರಕ್ಷಿಸಿ, ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ADVERTISEMENT

ಗ್ರಾಮೀಣ ಜನರು ಶೌಚಾಲಯ ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳು ವುದರ ಜತೆಗೆ ಸ್ವಚ್ಛಗ್ರಾಮದ ಆಂದೋಲನಕ್ಕೆ ಕೈಜೊಡಿಸಬೇಕು ಎಂದು ಕರೆ ನೀಡಿದರು.

ಜಮಖಂಡಿ ಇಒ ಅಶೋಕ ತೇಲಿ, ಬಿಇಒ ಎಂ.ಬಿ.ಮೊರಟಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಪ್ಪ ಹಿಪ್ಪರಗಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಲಲಿತಾ ನಂದೆಪ್ಪನವರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎ.ದೇಸಾಯಿ, ಅಹಿಂಸಾ ಸಂಸ್ಥೆ ಅಧ್ಯಕ್ಷ ಬಿ.ಆರ್.ಬಿ.ಪಾಟೀಲ, ತಹಶೀಲ್ದಾರ್ ಮಹಿಬೂಬಿ, ಶಿರಸ್ತೇದಾರ್ ಎಸ್.ಬಿ.ಕಾಂಬಳೆ, ವೃತ್ತ ನಿರೀಕ್ಷಕ ಶ್ರೀಕಾಂತ ಮಾಯನ್ನವರ, ಶಿಕ್ಷಣ ಸಂಯೋಜಕ ಎಸ್.ಬಿ.ಬುರ್ಲಿ, ಗ್ರಾಮಲೆಕ್ಕಾಧಿಕಾರಿ ನಾಗೇಶ ಲಮಾಣಿ, ಪಿಡಿಒಗಳಾದ ಮಂಜು ಬಡಿಗೇರ, ಗಿರೀಶ ಕಡಕೋಳ, ಬಸಲಿಂಗ ವಾಲಿ, ಎನ್.ಎಸ್.ಪತ್ರಿ, ಬುದಗೆನ್ನವರ ಇದ್ದರು. ಎಸ್.ಎಂ.ನಂದೆಪ್ಪನವರ ನಿರೂಪಿಸಿ, ಬಿ.ಆರ್.ಕವಟಗೊಪ್ಪ ಸ್ವಾಗತಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.