ADVERTISEMENT

ತಾಳಿಕಟ್ಟದೆ ಹೆಸರು ಹೇಳಕಾಗಲ್ಲ: ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 7:38 IST
Last Updated 28 ಜೂನ್ 2022, 7:38 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ಬಾಗಲಕೋಟೆ: ತಾಳಿಕಟ್ಟದೆ ಹೆಸರು ಹೇಳಲು ಆಗುವುದಿಲ್ಲ‌ ಎಂದು ಜೆಡಿಎಸ್‌ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ ಇಬ್ರಾಹಿಂಹೇಳಿದರು.

ಕಾಂಗ್ರೆಸ್, ಬಿಜೆಪಿ ಹಲವು ನಾಯಕರು ಜುಲೈ ಅಂತ್ಯಕ್ಕೆ ಜೆಡಿಎಸ್ ಸೇರ್ಪಡೆ‌ ಆಗಲಿದ್ದಾರೆ ಎಂಬ ಅವರ‌ ಮಾತಿಗೆ, ಯಾರ್ಯಾರು ಸೇರಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಸೇರ್ಪಡೆಗೆ ವೇದಿಕೆ ಸಿದ್ದವಾಗುತ್ತದೆ. ಅವರು ಸೇರ್ಪಡೆಗೊಳ್ಳುವವರೆಗೆ ಹೆಸರು ಹೇಳಲಾಗುವುದಿಲ್ಲ ಎಂದರು.

ADVERTISEMENT

ಅರೆಂಜ್ ಮ್ಯಾರೇಜ್ ನಲ್ಲಿ ನಂಬಿಕೆ ಇಟ್ಟಿದ್ದೇವೆ. ಕಿಡ್ನಾಪ್ ಮಾಡಿ ಮದುವೆಯಾಗುವುದಿಲ್ಲ ಎಂದು ಹೇಳಿದರು.

ಕಾಂಗ್ರಸ್ ನವರು ಕ್ಯಾಬರೆ ಮಾಡುತ್ತಿದ್ದರೆ, ಬಿಜೆಪಿಯವರು ಆಂಗ್ಲೊ ಇಂಡಿಯನ್ ಡ್ಯಾನ್ಸ್ ಮಾಡುತ್ತಿದ್ದಾರೆ. ಜೆಡಿಎಸ್ ನವರದ್ದು ಭರತ ನಾಟ್ಯವಾಗಿದೆ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.