ADVERTISEMENT

ಸರಳ, ಸಜ್ಜನ ಮೇಟಿ: ರಮೇಶ ಬದ್ನೂರ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 4:13 IST
Last Updated 6 ನವೆಂಬರ್ 2025, 4:13 IST
ಎಚ್‌.ವೈ. ಮೇಟಿ
ಎಚ್‌.ವೈ. ಮೇಟಿ   

ಬಾಗಲಕೋಟೆ: ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಮೂಲ ಕಾರಣೀಭೂತರು ಎಚ್‌.ವೈ. ಮೇಟಿ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ರಮೇಶ ಬದ್ನೂರ ಹೇಳಿದರು.

ವಕೀಲರ ಸಂಘದಲ್ಲಿ ಹಮ್ಮಿಕೊಂಡಿದ್ದ ಎಚ್‌.ವೈ. ಮೇಟಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಸಂಘದ ಹಿರಿಯ ಸದಸ್ಯ ಎಸ್.ಕೆ. ಯದಡಳ್ಳಿ ಮಾತನಾಡಿ, ಮೇಟಿ ಅವರು ಅತ್ಯಂತ ಸರಳ, ಸಜ್ಜನ ರಾಜಕಾರಣಿಯಾಗಿದ್ದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ವ್ಯಕ್ತಿತ್ವ ಅವರದಾಗಿತ್ತು ಎಂದರು.

ADVERTISEMENT

ಚಂದ್ರಶೇಖರ ರಾಥೋಡ ಮಾತನಾಡಿ, ಅತ್ಯಂತ ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿದ್ದರು. ಅವರು ವಕೀಲರ  ಸಂಘಕ್ಕೆ  ಮಾಡಿದ ಕಾರ್ಯಗಳನ್ನು ಸ್ಮರಿಸಿದರು.

ಹಿರಿಯ ವಕೀಲರಾದ ಕೆ.ಜಿ ಪುರಾಣಿಕಮಠ, ಸಿ.ಎಲ್. ದಾಸನವರ, ಎಸ್.ಎಲ್. ಕೋರಾ ಮಾತನಾಡಿದರು. ನಂತರ ಒಂದು ನಿಮಿಷ ಮೌನ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.