ಮುಧೋಳ: ರನ್ನ ವೈಭವ ಅಂಗವಾಗಿ ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಗುಜರಾತ್ನ ಸ್ವಾಮಿ ನಾರಾಯಣ ತಂಡ, ಪುರುಷರ ವಿಭಾಗದಲ್ಲಿ ಮುಂಬೈ ಪೋರ್ಟ್ ತಂಡ ಪ್ರಥಮ ಸ್ಥಾನ ಪಡೆದು, ತಲಾ ₹1 ಲಕ್ಷ ಬಹುಮಾನ ಗಳಿಸಿದವು.
ಮಹಿಳೆಯರ ವಿಭಾಗದ ಫಲಿತಾಂಶ: ವೆಸ್ಟರ್ನ್ ರೈಲ್ವೆ (ದ್ವಿತೀಯ), ಎಸ್ಎಸ್ಎ ಹರಿಯಾಣ (ತೃತೀಯ) ಹಾಗೂ ಬಹಾದುರಗಡ ಹರಿಯಾಣ (ತೃತೀಯ).
ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ರೈಡರ್ ಆಗಿ ವೆಸ್ಟರ್ನ್ ರೈಲ್ವೆಯ ರಶ್ಮಿ ಪಾಟೀಲ, ಬೆಸ್ಟ್ ಕ್ಯಾಚರ್ ಆಗಿ ಗುಜರಾತಿನ ವಂಶಿಕಾರ, ಬೆಸ್ಟ್ ಆಲ್ ರೌಂಡರ್ ಆಗಿ ಗುಜರಾತ್ನ ಪ್ರಾಂಜಲಾ ಬಹುಮಾನ ಪಡೆದುಕೊಂಡರು.
ಪುರುಷರ ವಿಭಾಗ ಫಲಿತಾಂಶ: ಗುಜರಾತ್ನ ಸ್ವಾಮಿ ನಾರಾಯಣ (ದ್ವಿತೀಯ), ರೈಲ್ವೆ ಆ್ಯಂಡ್ ವೀಲ್ ಫ್ಯಾಕ್ಟರಿ ತಂಡ (ತೃತೀಯ) ಹಾಗೂ ಪುಣೆಯ ಪಿಟಿಬಿ ತಂಡ (ತೃತೀಯ).
ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ರೈಡರ್ ಆಗಿ ಬೆಂಗಳೂರಿನ ಆರ್ಡಬ್ಲುಎಫ್ ತಂಡದ ಆನಂದ, ಅತ್ಯುತ್ತಮ ಕ್ಯಾಚರ್ ಆಗಿ ಸ್ವಾಮಿ ನಾರಾಯಣ ತಂಡದ ರಾಹುಲ್, ಬೆಸ್ಟ್ ಆಲ್ರೌಂಡರ್ ಆಗಿ ಮುಂಬೈ ಪೋರ್ಟ್ ತಂಡದ ಸಾಹಿಲ್ ಬಹುಮಾನ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.