ADVERTISEMENT

ಬಾಗಲಕೋಟೆ | ಪಂಚಮಸಾಲಿ ಪೀಠ: ಸ್ವಾಮೀಜಿಗಳ ಗೋಪ್ಯ ಸಭೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 18:55 IST
Last Updated 24 ಜುಲೈ 2025, 18:55 IST

ಹುನಗುಂದ: ತಾಲ್ಲೂಕಿನ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಇಳಕಲ್ ವಿಜಯಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮತ್ತು ಸ್ಥಳೀಯ ಮುಖಂಡರು ಸೇರಿ ಪಟ್ಟಣದ ಬಸವ ಮಂಟಪದ ಕೊಠಡಿಯೊಂದರಲ್ಲಿ ಗುರುವಾರ ಅರ್ಧ ಗಂಟೆಗೂ ಹೆಚ್ಚು ಹೊತ್ತು ಗೋಪ್ಯ ಸಭೆ ನಡೆಸಿದರು.

‘ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು  ಸ್ವಾಮೀಜಿ ನಡುವಿನ ಬಿಕ್ಕಟ್ಟು ಶಮನಗೊಳಿಸಿ, ಸಂಧಾನ ನಡೆಸುವ ಸಭೆಯ ಉದ್ದೇಶವಾಗಿತ್ತು’ ಎನ್ನಲಾಗಿದೆ.  

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ‘ಶ್ರಾವಣ ಮಾಸದಲ್ಲಿ ಆಚರಿಸುವ ಬಸವ ಪಂಚಮಿ ಕುರಿತು ಚರ್ಚಿಸಲು ಬಂದಿದ್ದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.