ADVERTISEMENT

ಸಮ್ಮತಿ ಪಡೆಯದೆ ದಸರಾ‌ ಕವಿಗೋಷ್ಠಿಯಲ್ಲಿ ಹೆಸರು ಸೇರ್ಪಡೆ: ಪಾತ್ರೋಟ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 2:13 IST
Last Updated 28 ಸೆಪ್ಟೆಂಬರ್ 2022, 2:13 IST
ಆಮಂತ್ರಣ ಪತ್ರಿಕೆ
ಆಮಂತ್ರಣ ಪತ್ರಿಕೆ   

ಬಾಗಲಕೋಟೆ: ಸಮ್ಮತಿ ಪಡೆಯದೆ ಮೈಸೂರು ದಸರಾ‌ ಕವಿಗೋಷ್ಠಿಯಲ್ಲಿ ತಮ್ಮ ಹೆಸರು ಮುದ್ರಿಸಿರುವುದಕ್ಕೆ ಕವಿ ಸತ್ಯಾನಂದ ಪಾತ್ರೋಟ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಅ.3 ರಂದು ನಡೆಯುವ ಕವಿಗೋಷ್ಠಿಯಲ್ಲಿ ನನ್ನ ಹೆಸರು ಹಾಕಿಕೊಂಡಿರುವುದು ಸ್ನೇಹಿತರ ಮೂಲಕ ಗೊತ್ತಾಗಿದೆ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

‘ನನ್ನ ಒಪ್ಪಿಗೆ ಇಲ್ಲದೇ ಅದ್ಹೇಗೆ ಗೋಷ್ಠಿಗೆ ಸೇರಿಸಿಕೊಳ್ಳಲಾಯಿತು ಎಂಬುದನ್ನು ಆಯೋಜಕರೇ ಸ್ಪಷ್ಟಪಡಿಸಬೇಕು. ಈಗಾಗಲೇ ದಸರಾ ಕವಿಗೋಷ್ಠಿಗಳಲ್ಲಿ ಮೂರು ಸಲ ಭಾಗವಹಿಸಿದ್ದೇನೆ. ಒಂದು ಸಲ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೇನೆ. ಒಪ್ಪಿಗೆ ಇಲ್ಲದ ಕವಿಗೋಷ್ಠಿಯಲ್ಲಿ ಭಾಗವಹಿಸುವುದು ಆತ್ಮವಂಚನೆಯಾಗುತ್ತದೆ’ ಎಂದಿದ್ದಾರೆ.

ADVERTISEMENT

‘ಈಗಾಗಲೇ ಭಾಗವಹಿಸಿದವರನ್ನೇ ಪದೇ ಪದೇ ಆಹ್ವಾನಿಸುವುದಕ್ಕಿಂತ ಹೊಸಬರಿಗೆ ಅವಕಾಶ ನೀಡುವುದು ಸೂಕ್ತ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.