ADVERTISEMENT

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ: ನೇಕಾರನ ಪುತ್ರ ಚೇತನ್ ಜಿಲ್ಲೆಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 12:26 IST
Last Updated 14 ಜುಲೈ 2020, 12:26 IST
ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಚೇತನ್‌ಗೆ ಅಮ್ಮ ವಿಜಯಲಕ್ಷ್ಮಿ ಸಿಹಿ ತಿನ್ನಿಸಿದರು. ಅಪ್ಪ ಹಾಗೂ ಸಹೋದರಿ ಚಿತ್ರದಲ್ಲಿದ್ದಾರೆ
ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಚೇತನ್‌ಗೆ ಅಮ್ಮ ವಿಜಯಲಕ್ಷ್ಮಿ ಸಿಹಿ ತಿನ್ನಿಸಿದರು. ಅಪ್ಪ ಹಾಗೂ ಸಹೋದರಿ ಚಿತ್ರದಲ್ಲಿದ್ದಾರೆ   

ಬಾಗಲಕೋಟೆ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 97.5 ಅಂಕಗಳಿಸಿರುವ ಬನಹಟ್ಟಿಯ ಎಸ್‌ಅರ್‌ಎ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಚೇತನ್ ಕಾಡಪ್ಪ ಸಿದ್ದಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಚೇತನ್ ಸಿದ್ದಾಪುರ ಕನ್ನಡ ವಿಷಯದಲ್ಲಿ 100ಕ್ಕೆ 99 ಅಂಕ, ಇಂಗ್ಲಿಷ್ 90, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 98 ಗಣಿತ 99, ಜೀವಶಾಸ್ತ್ರ ವಿಷಯದಲ್ಲಿ 100 ಅಂಕ ಪಡೆದಿದ್ದಾರೆ.

ತಂದೆ ಕಾಡಪ್ಪ ನೇಕಾರಿಕೆಯನ್ನು ವೃತ್ತಿ ಮಾಡುತ್ತಾರೆ. ಚೇತನ್ ಕೂಡಾ ಬಿಡುವಿನ ಸಮಯದಲ್ಲಿ ನೇಯ್ಗೆ ಮಾಡುತ್ತಾರೆ.

ADVERTISEMENT

ತಗಡಿನ ಮೇಲ್ಛಾವಣಿಯ ಮನೆಯಲ್ಲಿ ಮಗ್ಗದ ಸಪ್ಪಳದಲ್ಲಿ ಓದಲಾಗದೆ ನಿತ್ಯ ಕಾಲೇಜಿನಲ್ಲಿ ಸಂಜೆ ಐದು ಗಂಟೆಯವರೆಗೆ ಓದುತ್ತಿದ್ದೆ ಎಂದು ಚೇತನ್ ಹೇಳಿದರು.

ಮಗನ ಸಾಧನೆಗೆ ಕಾಲೇಜಿನ ಉಪನ್ಯಾಸಕರ ಸಹಾಯ ಸಹಕಾರ ಅತಿ ಮುಖ್ಯವಾಗಿದೆ ಎಂಬುದು ತಾಯಿ ವಿಜಯಲಕ್ಷ್ಮಿ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.