ADVERTISEMENT

ಪ್ರವಾಸೋದ್ಯಮ ಇಲಾಖೆ ಹಗರಣ: ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 16:15 IST
Last Updated 19 ಜುಲೈ 2024, 16:15 IST
ಪ್ರವೀಣ ನಾಯ್ಕರ
ಪ್ರವೀಣ ನಾಯ್ಕರ   

ಬಾಗಲಕೋಟೆ: ಪ್ರವಾಸೋದ್ಯಮ ಇಲಾಖೆಯ ₹2.47 ಕೋಟಿ ಹಣ ವಿವಿಧ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡ ಪ್ರಕರಣದಲ್ಲಿ ಮತ್ತೆ ಆರು ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಬ್ಯಾಂಕ್ ಉದ್ಯೋಗಿ ಸೂರಜ್‌ ಸಗರ ಸ್ನೇಹಿತರ ಖಾತೆಗಳಿಗೆ ಪ್ರವಾಸೋದ್ಯಮ ಇಲಾಖೆಯ ಹಣ ವರ್ಗಾವಣೆ ಮಾಡಲಾಗಿತ್ತು. ಇಲಾಖೆಯ ಹಣವನ್ನು ತಮ್ಮ ಖಾತೆಗಳಿಗೆ ಹಾಕಿಸಿಕೊಂಡು ಲಾಭ ಪಡೆದ ಆರೋಪದ ಮೇಲೆ ಮಹೇಶ ಜಾಲವಾದಿ, ಕಿರಣ ಝಿಂಗಾಡೆ, ಮಂಜುನಾಥ ಕೋಟಿ, ಪ್ರವೀಣ ವೇತಾಳ, ಅರುಣ ನಾಯ್ಕರ, ಶರಣಪ್ಪ ಬಸನಗೌಡರ ಎಂಬುವರನ್ನು  ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ ತಿಳಿಸಿದ್ದಾರೆ.

‘ಸೂರಜ್‌ ಸಗರ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ಮುಂದುವರೆದಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT
ಅರುಣ ನಾಯ್ಕರ
ಮಂಜುನಾಥ ಕೋಟಿ
ಶರಣಪ್ಪ ಬಸನಗೌಡರ
ಮಹೇಶ ಜಾಲವಾದಿ
ಕಿರಣ ಝಿಂಗಾಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.