
ಪ್ರಜಾವಾಣಿ ವಾರ್ತೆತೇರದಾಳ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ನಾಲ್ಕನೇ ಕಾಲುವೆ ಬಳಿಯಿರುವ ಚೆಕ್ ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಭಾನುವಾರ ಎರಡು ವಾಹನಗಳ ಪ್ರತ್ಯೇಕ ತಪಾಸಣೆ ಸಂದರ್ಭದಲ್ಲಿ ₹1.99ಲಕ್ಷ ದಾಖಲೆಯಿಲ್ಲದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ ತಿಳಿಸಿದ್ದಾರೆ.
ಮಹಾರಾಷ್ಟ್ರದ ದತ್ತವಾಡದ ಅಭಿಷೇಕ ಕಲ್ಲೊಳ್ಳಿ ಅವರಿಂದ ₹99ಸಾವಿರ ಮತ್ತು ಗೋಕಾಕನ ಅಭಿಜಿತ ಬೊಂಗಾಳೆ ಅವರಿಂದ ಒಂದು ಲಕ್ಷ ಹಣ ಜಪ್ತಿ ಮಾಡಲಾಗಿದೆ.
ತೇರದಾಳ ಪಿಎಸ್ಐ ಅಪ್ಪು ಐಗಳಿ, ಎಎಸ್ಐ ಎಲ್.ಬಿ.ಮಾಳಿ, ವಿವೇಕ ಸುವರ್ಣಖಂಡಿ, ಅಬಕಾರಿ ಇಲಾಖೆಯ ಅರುಣಕುಮಾರ ಜುಲ್ಪಿ, ಫ್ಲೈಯಿಂಗ್ ಸ್ಕ್ವಾಡ್ ಶಿವಮೂರ್ತಿ, ಪುರಸಭೆ ಅಧಿಕಾರಿ ಪ್ರತಾಪ ಕೊಡಗೆ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.