ಮಹಾಲಿಂಗಪುರ: ಪಟ್ಟಣದ ಗಡಾದಗಲ್ಲಿಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಚಾವಣಿಯ ಕೆಲ ಭಾಗ ಶುಕ್ರವಾರ ಕುಸಿದು ಬಿದ್ದಿದೆ.
ಈ ಟ್ಯಾಂಕ್ನಿಂದ ಗಡಾದ ಗಲ್ಲಿ, ಪೆಂಡಾರಿ ಗಲ್ಲಿ, ಕಲ್ಪಡ ಬಡಾವಣೆ ಸೇರಿದಂತೆ ಹತ್ತಕ್ಕೂ ಹೆಚ್ಚು ಬಡಾವಣೆಗಳಿಗೆ ನೀರು ಸರಬರಾಜು ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಟ್ಯಾಂಕ್ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಮಹಮ್ಮದ್ರಫೀಕ್ ಮಾಲದಾರ, ಮುನ್ನಾ ಅತ್ತಾರ, ಮಹಮ್ಮದ್ ಹುನ್ನೂರ, ಮಹಿಬೂಬ ಜೀರಗಾಳ, ನಜೀರ ಅತ್ತಾರ, ರಾಜೇಸಾಬ ಐನಾಪುರ, ಮೌಲಸಾಬ ಐನಾಪುರ, ನಬಿರಸಾಬ ಜಮಾದಾರ, ಇಮ್ನುಸ್ ಅತ್ತಾರ, ಸುಲ್ತಾನ ಐನಾಪುರ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.