ಬಳ್ಳಾರಿ:ನಿರಂತರ ಮಳೆಯಿಂದಾಗಿ ಮನೆಯ ಮಣ್ಣಿನ ಮೇಲ್ಛಾವಣಿ ಕುಸಿದು ದಂಪತಿ ಕೊಂಗಣ್ಣ (45) ಹಾಗೂ ಸಾವಿತ್ರಿ( 40) ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕೌಲ್ ಬಜಾರ್ ನ ಆದೋನಿ ಸ್ಟ್ರೀಟ್ನಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಅವರ ಮಗ ಸಂತೋಷ್ ಅಪಾಯದಿಂದ ಪಾರಾಗಿದ್ದಾನೆ. ಮನೆ ಸೋರುತ್ತಿದ್ದುದರಿಂದ ದಂಪತಿಯ ಇಬ್ಬರು ಹೆಣ್ಣು ಮಕ್ಕಳು ಸಂಬಂಧಿಕರ ಮನೆಯಲ್ಲಿ ಮಲಗಿದ್ದರು.
ಮಣ್ಣುಕುಸಿದ ಬಳಿಕ ಎಚ್ಚರಗೊಂಡ ಬಾಲಕ ಅಘಾತಗೊಂಡು ಒಳಗಿನಿಂದಲೇ ಬಾಗಿಲು ಬಡಿದು ಕಿರುಚಿಕೊಂಡ ಸದ್ದಿಗೆ ಎಚ್ಚರಗೊಂಡ ನೆರೆಹೊರೆಯವರು ಬಾಗಿಲು ಮುರಿದು ಆತನನ್ನು ರಕ್ಷಿಸಿದರು ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.