ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮೊಟ್ಟ ಮೊದಲ ಮಹಿಳಾ ಅಭ್ಯರ್ಥಿಯಾಗಿ ವಿನೋದ ಕರಣಂ ಅವರು ತಾಲೂಕು ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದರು.
ನಂತರ ಮಾತನಾಡಿ, ' ಪರಿಷತ್ತಿನ ಪ್ರತಿಯೊಬ್ಬ ಸದಸ್ಯರೂ ಮತ ನೀಡಿ ಬಹುಮತದಿಂದ ಗೆಲ್ಲುಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
'80 ವರ್ಷಗಳಿಂದ ಒಬ್ಬ ಮಹಿಳೆಗೂ ಅಧ್ಯಕ್ಷರಾಗಲು ಅವಕಾಶ ದೊರಕಿಲ್ಲ, ಈಗ ಮೊದಲ ಬಾರಿಗೆ ಮಹಿಳೆಯರಿಗೆ ಕನ್ನಡ ಮಾತೆಯ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು' ಎಂದು ಮನವಿ ಮಾಡಿದರು.
ಶ್ರೀ ಕನಕ ದುರಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ತಾಲೂಕು ಕಚೇರಿಗೆ ಬಂದ ಅವರು ಸಹಾಯಕ ಚುನಾವಣಾ ಅಧಿಕಾರಿ ಶಿವಲಿಂಗರೆಡ್ಡಿ ರವರಿಗೆ ನಾಮ ಪತ್ರ ಸಲ್ಲಿಸಿದರು.
ಸಿಎಂ.ಗಂಗಾಧರಯ್ಯ, ಸುಮಾರೆಡ್ಡಿ, ಪದ್ಮಾವತಿ, ಶೈಲಾ ಸುರೇಶ್, ಅಲುವೇಲು, ಕಮಲ ಬಸವರಾಜ್, ಭಾಗ್ಯಲಕ್ಷ್ಮಿ, ವಿದ್ಯಾ ರಾಮಚಂದ್ರ ರಾವ್, ಸಿಎಂ.ಪೂರ್ಣಿಮಾ, ವಿ.ಬಾಬು, ಬಸವರಾಜ್ ಬಳೆ, ರಾಮಪ್ರಸಾದ್, ವೈದ್ಯನಾಥ, ವಿರುಪಾಕ್ಷಯ್ಯ ಹಿರೇಮಠ, ಕೆ.ವೀರಭದ್ರಗೌಡ, ಜಿಎಸ್.ಮೃತ್ಯುಂಜಯ್ಯ, ಡಾ.ಅರುಣಾ ಕಾಮನೇನಿ, ರಾಮಚಂದ್ರ ರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.