ADVERTISEMENT

ಲಾರಿ ಡಿಕ್ಕಿ: ಬೈಕ್ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 1:54 IST
Last Updated 2 ಫೆಬ್ರುವರಿ 2021, 1:54 IST

ತೋರಣಗಲ್ಲು: ಸಮೀಪದ ವೇಣಿವೀರಾಪುರ ಗ್ರಾಮದ ಬಳಿ ಸೋಮವಾರ ಲಾರಿ ಡಿಕ್ಕಿ ಹೊಡೆದು ಬೈಕ್‌ ಸವಾರರಾದ ಬಳ್ಳಾರಿಯ ಕೌಲ್‌ಲಬಜಾರನ ಆಶ್ರಯ ಕಾಲೊನಿಯ ಗೌಸ್ (24) ಹಾಗೂ ಹಿಂಬದಿ ಸವಾರ ಇಮ್ರಾನ್(25) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಬ್ದುಲ್(23) ಗಂಭೀರವಾಗಿ ಗಾಯಗೊಂಡಿದ್ದು, ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕರು ಕುಡುತಿನಿಯಿಂದ ಬಳ್ಳಾರಿಯ ಕಡೆಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ ಎಂದು ಕುಡುತಿನಿ ಠಾಣೆ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT