ADVERTISEMENT

ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 13:41 IST
Last Updated 21 ಜುಲೈ 2019, 13:41 IST
ಅಹಿಂದ ಯುವ ವೇದಿಕೆಯ ಪದಾಧಿಕಾರಿಗಳು ಶಾಲಾ ಮಕ್ಕಳಿಗೆ ಬ್ಯಾಗ್‌ ವಿತರಿಸಿದರು
ಅಹಿಂದ ಯುವ ವೇದಿಕೆಯ ಪದಾಧಿಕಾರಿಗಳು ಶಾಲಾ ಮಕ್ಕಳಿಗೆ ಬ್ಯಾಗ್‌ ವಿತರಿಸಿದರು   

ಹೊಸಪೇಟೆ: ಅಹಿಂದ ಯುವ ವೇದಿಕೆಯಿಂದ ಶನಿವಾರ ನಗರದ ಗಂಗಾ ಪರಮೇಶ್ವರಿ ವಿದ್ಯಾಸಂಸ್ಥೆ ಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಬ್ಯಾಗ್‌ಗಳನ್ನು ವಿತರಿಸಲಾಯಿತು.

ಬ್ಯಾಗ್‌ ವಿತರಿಸಿದ ಬಳಿಕ ಮಾತನಾಡಿದ ವೇದಿಕೆಯ ತಾಲ್ಲೂಕು ಅಧ್ಯಕ್ಷ ಕುಬೇರ ದಲ್ಲಾಲಿ, ‘ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಪ್ರತಿ ವರ್ಷ ನಮ್ಮ ವೇದಿಕೆಯಿಂದ ನೆರವು ನೀಡಲಾಗುತ್ತದೆ. ಈ ವರ್ಷ ಎಲ್ಲ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್‌ ವಿತರಿಸಲಾಗಿದೆ’ ಎಂದು ಹೇಳಿದರು.

ಶಾಲೆಯ ಮುಖ್ಯಶಿಕ್ಷಕಿ ಸರಳಾ, ಅಹಿಂದ ಯುವ ವೇದಿಕೆಯ ಗೌರವ ಅಧ್ಯಕ್ಷ ಆರ್.ಚೇತನ್‍ರಾಜ್ ಜೈನ್, ಉಪಾಧ್ಯಕ್ಷ ಗಂಗಾಧರ, ಕಾರ್ಯದರ್ಶಿ ಪಿ.ಬಸವರಾಜ್, ಖಜಾಂಚಿ ಸಿ.ಕೊಟ್ರೇಶ್, ಮುಖಂಡರಾದ ಕೇಶವ, ಖಾದರ್, ಪಂಪಣ್ಣ, ಎಚ್.ಶೇಷಾ, ಟಿ.ಹನುಮಂತ, ಎಂ. ಜಗನ್ನಾಥ, ಇಂಗಳಿಗಿ ದ್ಯಾಮಣ್ಣ, ಕೆ.ರಾಘವೇಂದ್ರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.