ADVERTISEMENT

ಅಂಜನಾದ್ರಿಗೆ ಬಸ್‌ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 11:10 IST
Last Updated 9 ಜನವರಿ 2021, 11:10 IST
ಅಂಜನಾದ್ರಿಗೆ ಬಸ್‌ ಸಂಚಾರ ಆರಂಭಿಸಿದಕ್ಕೆ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಅವರಿಗೆ ಶ್ರೀರಾಮ ಸೇನೆಯ ಮುಖಂಡರು ಶನಿವಾರ ಅಭಿನಂದನೆ ಸಲ್ಲಿಸಿದರು
ಅಂಜನಾದ್ರಿಗೆ ಬಸ್‌ ಸಂಚಾರ ಆರಂಭಿಸಿದಕ್ಕೆ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಅವರಿಗೆ ಶ್ರೀರಾಮ ಸೇನೆಯ ಮುಖಂಡರು ಶನಿವಾರ ಅಭಿನಂದನೆ ಸಲ್ಲಿಸಿದರು   

ಹೊಸಪೇಟೆ: ಭಕ್ತರು, ಪ್ರವಾಸಿಗರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯು ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದಿಂದ ಗಂಗಾವತಿ ಸಮೀಪದ ಅಂಜನಾದ್ರಿಗೆ ಶನಿವಾರದಿಂದ ಬಸ್‌ ಸಂಚಾರ ಆರಂಭಿಸಿದೆ.

ಬೆಳಿಗ್ಗೆ 10 ಹಾಗೂ ಸಂಜೆ 4ಕ್ಕೆ ಬಸ್‌ ಪಯಣ ಬೆಳೆಸಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದರೆ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ತಿಳಿಸಿದ್ದಾರೆ.

ಹನುಮ ಭಕ್ತರು, ಪ್ರವಾಸಿಗರ ಅನುಕೂಲಕ್ಕಾಗಿ ಬಸ್‌ ವ್ಯವಸ್ಥೆ ಕಲ್ಪಿಸಬೇಕೆಂದು ಶ್ರೀರಾಮ ಸೇನೆಯ ಮುಖಂಡರು ಇತ್ತೀಚೆಗೆ ಮನವಿ ಪತ್ರ ಸಲ್ಲಿಸಿದ್ದರು.

ADVERTISEMENT

ಶ್ರೀರಾಮ ಸೇನೆಯ ತಾಲ್ಲೂಕು ಅಧ್ಯಕ್ಷ ಜಗದೀಶ್ ಕಾಮಾಟಗಿ, ಕಾರ್ಯಾಧ್ಯಕ್ಷ ಅನೂಪ್ ಕುಮಾರ್, ಉಪಾಧ್ಯಕ್ಷ ಬಂಗಾರಿ ಸೂರಿ, ಟಿ.ಎಂ.ಮಂಜುನಾಥ ಶೆಟ್ಟಿ, ಅಭಿಷೇಕ್ ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.