ADVERTISEMENT

ಬಳ್ಳಾರಿ | ಕೇಂದ್ರ ಬಜೆಟ್ ಪ್ರತಿ ಸುಟ್ಟು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:51 IST
Last Updated 28 ಜುಲೈ 2024, 15:51 IST
ಕೇಂದ್ರದ ಬಜೆಟ್‌ ಪ್ರತಿ ಸುಟ್ಟು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ರಾಜ್ಯ ಸಮಿತಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. 
ಕೇಂದ್ರದ ಬಜೆಟ್‌ ಪ್ರತಿ ಸುಟ್ಟು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ರಾಜ್ಯ ಸಮಿತಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.     

ಬಳ್ಳಾರಿ: ಕೇಂದ್ರದ ಬಜೆಟ್‌ ಪ್ರತಿ ಸುಟ್ಟು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ರಾಜ್ಯ ಸಮಿತಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. 

ಈ ವೇಳೆ ಮಾತನಾಡಿದ ಸಂಘದ ರಾಷ್ಟ್ರ ಘಟಕದ ಉಪಾಧ್ಯಕ್ಷ ಸುನೀತ್ ಕುಮಾರ್, ‘ಕೇಂದ್ರ ಬಜೆಟ್ ಜನ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೆಟ್ ಪರವಾಗಿದೆ. ಈ ಬಜೆಟ್ ರೈತರ ಬದುಕಿನ ಬವಣೆಗಳಿಗೆ ಪರಿಹಾರ ನೀಡದೆ ಪೊಳ್ಳು ಆಶ್ವಾಸನೆಗಳಿಂದ ತುಂಬಿದೆ. ಕನಿಷ್ಟ ಬೆಂಬಲ ಬೆಲೆಯಡಿ ರೈತರ ಉತ್ಪನ್ನಗಳನ್ನು ಸರ್ಕಾರ ಖರೀದಿಸಬೇಕು, ಅದನ್ನು ಕಾನೂನುಬದ್ಧವಾಗಿಸಬೇಕು, ವಿದ್ಯುತ್ ಮಸೂದೆ-2023 ಅನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಸಂಘಟನೆ ಆಗ್ರಹಿಸುತ್ತದೆ‘ ಎಂದರು. 

ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಶಶಿಧರ್ ಮಾತನಾಡಿ, ‘ನರೆಗಾ ವ್ಯವಸ್ಥೆಯನ್ನು ಬಲಪಡಿಸಬೇಕು, ಸಾಲಮನ್ನಾ ಮಾಡಬೇಕು ಮತ್ತು ಪಿಂಚಣಿ ಕೊಡಬೇಕು ಎಂದು ಬಹಳ ಕಾಲದಿಂದ ಹೋರಾಟ ನಡೆಸಲಾಗುತ್ತಿದೆ. ಈ ಹಕ್ಕೊತ್ತಾಯಗಳಲ್ಲಿ ಯಾವುದನ್ನೂ ಈಡೇರಿಲ್ಲ’ ಎಂದರು. 

ADVERTISEMENT

ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ, ಉಪಾಧ್ಯಕ್ಷ ವಿ.ನಾಗಮಾಳ್, ಎನ್. ಸ್ವಾಮಿ, ಲಕ್ಷ್ಮಣ್,  ಗಣಪತಿ ಮಾನೆ, ಮಹೇಶ್, ಗೋವಿಂದ್, ದೀಪಾ, ಶರಣು ಗೂಗಲ್, ಗುರಳ್ಳಿ ರಾಜ  ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.