ADVERTISEMENT

ಕಂಪ್ಲಿ: ಮಳೆಯಲ್ಲಿ ದೇಶಭಕ್ತಿ ಮೆರೆದ ನಾಗರಿಕರು

​ಪ್ರಜಾವಾಣಿ ವಾರ್ತೆ
Published 26 ಮೇ 2025, 14:23 IST
Last Updated 26 ಮೇ 2025, 14:23 IST
ಕಂಪ್ಲಿಯ ನಾಗರಿಕರ ವೇದಿಕೆ ಪದಾಧಿಕಾರಿಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ವಿಜಯ ತಿರಂಗಾ ಯಾತ್ರೆ ನಡೆಸಿದರು
ಕಂಪ್ಲಿಯ ನಾಗರಿಕರ ವೇದಿಕೆ ಪದಾಧಿಕಾರಿಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ವಿಜಯ ತಿರಂಗಾ ಯಾತ್ರೆ ನಡೆಸಿದರು   

ಕಂಪ್ಲಿ: ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಪಟ್ಟಣದ ನಾಗರಿಕರ ವೇದಿಕೆ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಸೋಮವಾರ ವಿಜಯ ತಿರಂಗಾ ಯಾತ್ರೆ ನಡೆಸಿದರು.

ಇಲ್ಲಿಯ ಉದ್ಭವ ಮಹಾ ಗಣಪತಿ ದೇವಸ್ಥಾನದಿಂದ ಆರಂಭಗೊಂಡ ತಿರಂಗಾ ಯಾತ್ರೆ ರಾಜ್‌ಕಮಾರ್ ರಸ್ತೆ ಮಾರ್ಗವಾಗಿ ಸಂಚರಿಸಿ ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಸಮಾವೇಶಗೊಂಡಿತು.

ಮಳೆಯಲ್ಲಿಯೇ ರಾಷ್ಟ್ರಧ್ವಜ ಹಿಡಿದ ನಾಗರಿಕರು ಭಾರತಮಾತೆ ಮತ್ತು ಸೈನಿಕರ ಪರ ಘೋಷಣೆ ಕೂಗಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ನಾಯ್ಡು ಮೋಕಾ ಮಾತನಾಡಿದರು. ಬಿಜೆಪಿ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ. ಮಹದೇವ, ಮುಖಂಡರಾದ ಅಳ್ಳಳ್ಳಿ ವೀರೇಶ್, ಪಿ. ಬ್ರಹ್ಮಯ್ಯ, ವಿ.ಎಲ್. ಬಾಬು, ಎಸ್.ಎಂ. ನಾಗರಾಜ, ಟಿ.ವಿ. ಸುದರ್ಶನರೆಡ್ಡಿ, ರಮೇಶ್ ಹೂಗಾರ್, ಎನ್. ರಾಮಾಂಜಿನೇಯಲು, ಕೊಡಿದಲ ರಾಜು, ರವಿ, ಸಿ. ಚನ್ನಪ್ಪ, ಬುಜ್ಜಿಕುಮಾರ್, ವಿರೂಪಾಕ್ಷಿ, ವೀರೇಶ್, ಶಂಭುಲಿಂಗ, ಗುರು, ಎಲಿಗಾರ್ ವೆಂಕಟರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.