ADVERTISEMENT

ಡಿ.ಕೆ‌.ಶಿವಕುಮಾರ್ ತುರ್ತು‌ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 7:51 IST
Last Updated 15 ಅಕ್ಟೋಬರ್ 2018, 7:51 IST
   

ಬಳ್ಳಾರಿ: ಲೋಕಸಭೆ ಉಪ‌ಚುನಾವಣೆ ಸಂಬಂಧ ತುರ್ತು ಪೂರ್ವ‌ ಸಿದ್ಧತೆ ಸಭೆ ನಡೆಸಲು ಉಸ್ತುವಾರಿ‌ ಸಚಿವ ಡಿ.ಕೆ.ಶಿವಕುಮಾರ್ ‌ನಗರಕ್ಕೆ ಇಂದು‌ ಸಂಜೆ‌ ಬರಲಿದ್ದಾರೆ.

ಸಂಜೆ 5ರ ವೇಳೆಗೆ ಜಿಲ್ಲಾ ಕಾಂಗ್ರೆಸ್ ‌ಸಮಿತಿ‌ ಕಚೇರಿಯಲ್ಲಿ‌ ಸಭೆ ನಡೆಸಲಿದ್ದಾರೆ.

ಅಭ್ಯರ್ಥಿ ಆಯ್ಕೆ‌ ಕುರಿತು ಇದ್ದ ಗೊಂದಲ‌ ಭಾನುವಾರ ರಾತ್ರಿ ಕೊನೆಗೊಂಡಿದ್ದು, ಗ್ರಾಮೀಣ ಶಾಸಕ ‌ಬಿ.ನಾಗೇಂದ್ರ ಅವರ ಅಣ್ಣ ಬಿ.ವೆಂಕಟೇಶ ಪ್ರಸಾದ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.

ADVERTISEMENT

ನಾಮಪತ್ರ ಸಲ್ಲಿಸಲು‌ ಮಂಗಳವಾರ ಕೊನೇ‌ ದಿನವಾಗಿದ್ದು‌ ಶಿವಕುಮಾರ್ ಕೂಡ ಉಪಸ್ಥಿತರಿರುತ್ತಾರೆ ಎಂದು ನಗರ‌ ಜಿಲ್ಲಾ ಕಾಂಗ್ರೆಸ್ ಸಮಿತಿ‌ ಅಧ್ಯಕ್ಷ‌ ಮಹ್ಮದ್ ರಫೀಕ್ ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಜೆ.ಶಾಂತಾ‌‌ ನಾಮಪತ್ರ ಸಲ್ಲಿಕೆ‌ ನಾಳೆ

ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಜೆ. ಶಾಂತಾ ಅವರು ಅ. 16‌ರಂದು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.

ನಗರದ ಎಸ್.ಪಿ.ಸರ್ಕಲ್‍ನಿಂದ ಮೆರವಣಿಗೆ ಮೂಲಕ ಶಾಂತಾ‌ ಜಿಲ್ಲಾಧಿಕಾರಿ ಕಚೇರಿಗೆ‌ ಬಂದು ನಾಮಪತ್ರ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.