ADVERTISEMENT

ಸಾವಿನಲ್ಲಿ ರೈತನ ಸಾರ್ಥಕತೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 13:25 IST
Last Updated 11 ಜನವರಿ 2022, 13:25 IST
ಕಣಿಮೆಪ್ಪ
ಕಣಿಮೆಪ್ಪ   

ಹೊಸಪೇಟೆ: ಇಲ್ಲಿನ ಅನಂತಶಯನಗುಡಿಯ ರೈತ ಮೇಟಿ ಕಣಿಮೆಪ್ಪ (71) ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ನಟ ಪುನೀತ್‌ ರಾಜಕುಮಾರ್‌ ಅವರಿಂದ ಪ್ರಭಾವಿತರಾಗಿದ್ದ ಕಣಿಮೆಪ್ಪ ಅವರು ಕೆಲ ದಿನಗಳ ಹಿಂದೆ ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿಸಿದ್ದರು. ಸೋಮವಾರ ಅವರು ನಿಧನರಾಗಿದ್ದು, ಅವರ ಪಾರ್ಥೀವ ಶರೀರವನ್ನು ಆಸ್ಪತ್ರೆಗೆ ಕೊಂಡೊಯ್ದು ಕಣ್ಣು ತೆಗೆದುಕೊಳ್ಳಲಾಗಿದೆ. ಕಣಿಮೆಪ್ಪ ಅವರ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ಅವರನ್ನು ಅನೇಕರು ಹೊಗಳಿದ್ದಾರೆ.

ಮಂಗಳವಾರ ಅವರ ಅಂತ್ಯಕ್ರಿಯೆ ನಡೆಯಿತು. ಮೃತರಿಗೆ ಪತ್ನಿ, ಮೂವರು ಗಂಡು, ಹೆಣ್ಣು ಮಗಳಿದ್ದಾಳೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.