ADVERTISEMENT

ಬಿಡಾಡಿ ದನ, ನಾಯಿಗಳಿಗೆ ಆಹಾರ

​ಪ್ರಜಾವಾಣಿ ವಾರ್ತೆ
Published 14 ಮೇ 2021, 16:05 IST
Last Updated 14 ಮೇ 2021, 16:05 IST
ಡಿವೈಎಸ್ಪಿ ವಿ. ರಘುಕುಮಾರ ಅವರು ಶುಕ್ರವಾರ ಹೊಸಪೇಟೆಯ ಹಂಪಿ ರಸ್ತೆಯಲ್ಲಿ ಬಿಡಾಡಿ ದನಗಳಿಗೆ ಆಹಾರ ತಿನ್ನಿಸಿದರು
ಡಿವೈಎಸ್ಪಿ ವಿ. ರಘುಕುಮಾರ ಅವರು ಶುಕ್ರವಾರ ಹೊಸಪೇಟೆಯ ಹಂಪಿ ರಸ್ತೆಯಲ್ಲಿ ಬಿಡಾಡಿ ದನಗಳಿಗೆ ಆಹಾರ ತಿನ್ನಿಸಿದರು   

ಹೊಸಪೇಟೆ(ವಿಜಯನಗರ): ನಗರದಲ್ಲಿ ಬಿಡಾಡಿ ದನಗಳಿಗೆ ಆಹಾರ ಒದಗಿಸಲು ಉದ್ಯಮಿ ವಿಕಾಸ್‌ ಜೈನ್‌ ಮುಂದೆ ಬಂದಿದ್ದಾರೆ.

ಬಸವ ಜಯಂತಿ ಶುಭ ದಿನವೆಂದು ಶುಕ್ರವಾರದಿಂದ ಆಹಾರ ಪೂರೈಸುವ ಕೆಲಸ ಆರಂಭಿಸಿದ್ದಾರೆ. ನಗರದ ಹಂಪಿ ರಸ್ತೆಯಲ್ಲಿ ಡಿವೈಎಸ್ಪಿ ವಿ. ರಘುಕುಮಾರ ಅವರು ಬಿಡಾಡಿ ದನ, ನಾಯಿಗಳಿಗೆ ಆಹಾರ ತಿನ್ನಿಸುವುದರ ಮೂಲಕ ಚಾಲನೆ ನೀಡಿದರು.

‘ಕೋವಿಡ್‌ ನಿಷೇಧಾಜ್ಞೆಯಿಂದಾಗಿ ಬಿಡಾಡಿ ದನಗಳು, ಬೀದಿ ನಾಯಿಗಳು ಆಹಾರವಿಲ್ಲದೆ ಸಂಕಷ್ಟ ಎದುರಿಸುತ್ತಿವೆ. ಅದನ್ನು ಮನಗಂಡು ಅವುಗಳ ನೆರವಿಗೆ ವಿಕಾಸ್‌ ಜೈನ್‌ ಅವರು ಮುಂದೆ ಬಂದಿರುವುದು ಉತ್ತಮ ಸಂಗತಿ. ಕಷ್ಟದ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಇಂತಹ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ರಘುಕುಮಾರ ಹೇಳಿದರು.

ADVERTISEMENT

ಶನಿವಾರ (ಮೇ 15) ತಾಲ್ಲೂಕಿನ ಹಂಪಿಯಲ್ಲಿ ಅಲ್ಲಿನ ಮಂಗ, ಬಿಡಾಡಿ ದನ ಹಾಗೂ ನಾಯಿಗಳಿಗೆ ಆಹಾರ ಪೂರೈಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.