ಕೂಡ್ಲಿಗಿ (ಬಳ್ಳಾರಿ): ಕೃಷಿ ಭೂಮಿ ಹೊಂದಿಲ್ಲದ ಪಾಲಕರ ಮಕ್ಕಳಿಗೂ ಬಿಎಸ್ಸಿ ಕೃಷಿ ಪದವಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಇಲ್ಲಿನ ವಿದ್ಯಾರ್ಥಿನಿಯೊಬ್ಬರು ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಪತ್ರ ಬರೆದು, ಮನವಿ ಮಾಡಿಕೊಂಡಿದ್ದಾರೆ.
ಪಟ್ಟಣದ 19ನೇ ವಾರ್ಡ್ನ ಕೆ.ಕೆ ಹಟ್ಟಿ ನಿವಾಸಿ, ಡಿ.ಭಾರತಿ ಪತ್ರ ಬರೆದಿದ್ದು, ‘ನನ್ನ ತಂದೆಗೆ ಸ್ವಂತ ಕೃಷಿ ಭೂಮಿ ಇಲ್ಲ. ಬೇರೊಬ್ಬರ ಜಮೀನಿನಲ್ಲಿ ದುಡಿಯುತ್ತಾರೆ. ನನಗೆ ಬಿ.ಎಸ್ಸಿ ಕೃಷಿ ಕಲಿಯಬೇಕೆಂದು ತುಂಬಾ ಆಸಕ್ತಿಯಿದೆ. ಆದರೆ, ಪಾಲಕರ ಹೆಸರಿನಲ್ಲಿ ಪಹಣಿ ಪತ್ರ ಇಲ್ಲದ್ದರಿಂದ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.
‘ಪದವಿಗೆ ಪ್ರವೇಶ ಪಡೆಯಬೇಕಾದರೆ ಕೃಷಿಕರ ಮಕ್ಕಳಾಗಿರಬೇಕು ಎನ್ನುವ ನಿಯಮ ನನಗೆ ಅಡ್ಡಿಯಾಗಿದೆ. ದಯವಿಟ್ಟು, ಈ ನಿಯಮವನ್ನು ಸಡಿಲುಗೊಳಿಸಬೇಕು. ಆಸಕ್ತರಿಗೆ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಕೋರಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.