ADVERTISEMENT

ಬಿಎಸ್ಸಿ ಕೃಷಿ ಪದವಿ: ವಿದ್ಯಾರ್ಥಿನಿ ಪತ್ರ

ಕೃಷಿ ಸಚಿವರಿಗೆ ವಿದ್ಯಾರ್ಥಿನಿ ಪತ್ರ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 19:52 IST
Last Updated 4 ಸೆಪ್ಟೆಂಬರ್ 2020, 19:52 IST
ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೆ ಬಿಎಸ್ಸಿ ಕೃಷಿ ಪದವಿ ಪ್ರವೇಶ ಪಡೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಕೂಡ್ಲಿಗಿ ಪಟ್ಟಣದ ವಿದ್ಯಾರ್ಥಿನಿ ಡಿ. ಭಾರತಿ ಕೃಷಿ ಸಚಿವರಿಗೆ ಬರೆದ ಪತ್ರವನ್ನು ಅಂಚೆ ಪೆಟ್ಟಿಗೆಗೆ ಹಾಕಿದರು
ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೆ ಬಿಎಸ್ಸಿ ಕೃಷಿ ಪದವಿ ಪ್ರವೇಶ ಪಡೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಕೂಡ್ಲಿಗಿ ಪಟ್ಟಣದ ವಿದ್ಯಾರ್ಥಿನಿ ಡಿ. ಭಾರತಿ ಕೃಷಿ ಸಚಿವರಿಗೆ ಬರೆದ ಪತ್ರವನ್ನು ಅಂಚೆ ಪೆಟ್ಟಿಗೆಗೆ ಹಾಕಿದರು   

ಕೂಡ್ಲಿಗಿ (ಬಳ್ಳಾರಿ): ಕೃಷಿ ಭೂಮಿ ಹೊಂದಿಲ್ಲದ ಪಾಲಕರ ಮಕ್ಕಳಿಗೂ ಬಿಎಸ್ಸಿ ಕೃಷಿ ಪದವಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಇಲ್ಲಿನ ವಿದ್ಯಾರ್ಥಿನಿಯೊಬ್ಬರು ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಪತ್ರ ಬರೆದು, ಮನವಿ ಮಾಡಿಕೊಂಡಿದ್ದಾರೆ.

ಪಟ್ಟಣದ 19ನೇ ವಾರ್ಡ್‌ನ ಕೆ.ಕೆ ಹಟ್ಟಿ ನಿವಾಸಿ, ಡಿ.ಭಾರತಿ ಪತ್ರ ಬರೆದಿದ್ದು, ‘ನನ್ನ ತಂದೆಗೆ ಸ್ವಂತ ಕೃಷಿ ಭೂಮಿ ಇಲ್ಲ. ಬೇರೊಬ್ಬರ ಜಮೀನಿನಲ್ಲಿ ದುಡಿಯುತ್ತಾರೆ. ನನಗೆ ಬಿ.ಎಸ್ಸಿ ಕೃಷಿ ಕಲಿಯಬೇಕೆಂದು ತುಂಬಾ ಆಸಕ್ತಿಯಿದೆ. ಆದರೆ, ಪಾಲಕರ ಹೆಸರಿನಲ್ಲಿ ಪಹಣಿ ಪತ್ರ ಇಲ್ಲದ್ದರಿಂದ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಪದವಿಗೆ ಪ್ರವೇಶ ಪಡೆಯಬೇಕಾದರೆ ಕೃಷಿಕರ ಮಕ್ಕಳಾಗಿರಬೇಕು ಎನ್ನುವ ನಿಯಮ ನನಗೆ ಅಡ್ಡಿಯಾಗಿದೆ. ದಯವಿಟ್ಟು, ಈ ನಿಯಮವನ್ನು ಸಡಿಲುಗೊಳಿಸಬೇಕು. ಆಸಕ್ತರಿಗೆ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಕೋರಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.