ADVERTISEMENT

ಹೊಸಪೇಟೆ| ಮಾರುಕಟ್ಟೆಗೆ ಬಂದವರಿಗೆ ಬೆತ್ತದ ಏಟು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2020, 7:27 IST
Last Updated 25 ಮಾರ್ಚ್ 2020, 7:27 IST

ಹೊಸಪೇಟೆ: ನಿಷೇಧಾಜ್ಞೆ ನಡುವೆಯೂ ಗುಂಪು ಗುಂಪಾಗಿ ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣಕ್ಕೆ ಬಂದಿದ್ದ ಜನರಿಗೆ ಬೆತ್ತದ ಏಟು ಕೊಟ್ಟು ಕಳುಹಿಸಿದರು.

ಮನೆಯಿಂದ ಹೊರಗೆ ಬರದಂತೆ ಬೆಳಿಗ್ಗೆ ಪೊಲೀಸರು ಧ್ವನಿವರ್ಧಗಳ ಮೂಲಕ ಪ್ರಚಾರ ಕೈಗೊಂಡು ಮನವಿ ಮಾಡಿದ್ದರು. ಆದರೆ, ಅದನ್ನು ಲೆಕ್ಕಿಸದೆ ಖರೀದಿಗೆ ಮಾರುಕಟ್ಟೆಗೆ ಬಂದಿದ್ದರು. ಜನರ ದಟ್ಟಣೆ ಹೆಚ್ಚಾಗಿರುವುದನ್ನು ಗಮನಿಸಿದ ಪೊಲೀಸರು ಲಾಠಿಯಿಂದ ಹೊಡೆದು ಅವರನ್ನು ಚದುರಿಸಿದರು. ನಗರದ ತುಂಬೆಲ್ಲಾ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಸಕಾರವಿಲ್ಲದೆ ರಸ್ತೆ ಬಂದರೆ ಅವರ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಮಂಗಳವಾರ ಐದು ಹೋಟೆಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ಹತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ‌ ತೆಗೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT