ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಸೋಮವಾರ ಬೆಳಗಿನ ಜಾವ ಭಾರಿ ಮಳೆಯಾಗಿದ್ದು, ಮೂರು ಮನೆಗಳಿಗೆ ಹಾನಿಯಾಗಿದೆ.
ರಾಯರಾಳ ತಾಂಡಾದ ಗೌಡ್ರು ರತ್ನಮ್ಮ, ಕಮಲಬಾಯಿ ಹಾಗೂ ಕೆಚ್ಚಿನಬಂಡಿ ಗ್ರಾಮದ ರತ್ನಮ್ಮ ಬಸವರಾಜ ಅವರ ಮನೆಗಳು ಭಾಗಶಃ ಕುಸಿದಿವೆ. ಕಿತ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಮಳೆ ನೀರಿನಿಂದ ಆವೃತವಾಗಿತ್ತು.
ಬ್ಯಾಲಹಾಳು, ಹನಸಿ, ಚಿಲಗೋಡು ಕೆರೆಗಳಿಗೆ ನೀರು ಹರಿದು ಬಂದಿದೆ. ತಾಲ್ಲೂಕಿನ ಬಹುತೇಕ ಹಳ್ಳಗಳಲ್ಲಿ ನೀರು ಹರಿಯಿತು. ಕೃಷಿಹೊಂಡಗಳು ಭರ್ತಿಯಾಗಿವೆ.
ಪಟ್ಟಣದಲ್ಲಿ 4.66 ಸೆಂ.ಮೀ, ತಂಬ್ರಹಳ್ಳಿಯಲ್ಲಿ 5.16 ಸೆಂ.ಮೀ, ಹಂಪಸಾಗರದಲ್ಲಿ 6.04 ಸೆಂ.ಮೀ, ಮಾಲವಿಯಲ್ಲಿ 4.84 ಸೆಂ.ಮೀ ಮಳೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.