ADVERTISEMENT

ಬಳ್ಳಾರಿ: ಚಿರತೆ ದಾಳಿಗೆ 13 ಕುರಿಗಳ ಬಲಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 11:37 IST
Last Updated 22 ಫೆಬ್ರುವರಿ 2023, 11:37 IST
   

ಬಳ್ಳಾರಿ : ಬಳ್ಳಾರಿ ತಾಲೂಕಿನ ಸಂಜೀವರಾಯಕೋಟೆ ಗ್ರಾಮದಲ್ಲಿ ತಡರಾತ್ರಿ ಚಿರತೆಗಳ ದಾಳಿ ಮಾಡಿ 13 ಕುರಿಗಳನ್ನು ಬಲಿ ಪಡೆದಿರುವ ಘಟನೆ ನಡೆದಿದೆ.

ಗ್ರಾಮದ ಮಾರುತಿ ಅವರು ಸಾಕಿದ್ದ ಕುರಿಗಳ ಹಟ್ಟಿಯ ಮೇಲೆ ಚಿರತೆಗಳು ದಾಳಿ ನಡೆಸಿವೆ. ಹಟ್ಟಿಯ ಬಿದರಿನ ತಡಿಕೆಯ ಮೇಲೆ ಹಾರಿರುವ ಚಿರತೆಗಳು ಒಟ್ಟು 13 ಕುರಿಗಳ ರಕ್ತ ಹೀರಿವೆ.

ಕುರಿಗಳ ಒಂದೇ ಸಮನೆ ಕಿರುಚಾಟ ಕೇಳಿರುವ ಸುತ್ತಮುತ್ತಲಿನವರು ಹಟ್ಟಿಯ ಕಡೆ ದೌಡಯಿಸಿದ ಹಿನ್ನೆಲೆಯಲ್ಲಿ ಚಿರತೆಗಳು ಅಲ್ಲಿಂದ ಪರಾರಿಯಾಗಿವೆ. ಮಾರುತಿ ಸಾಕಿದ್ದ 25 ಕುರಿಗಳ ಪೈಕಿ 13 ಚಿರತೆಗಳ ದಾಳಿಗೆ ಬಲಿಯಾಗಿವೆ. ಈ ಕುರಿತು ಪ್ರತಿಕ್ರಿಯೆಗೆ ಅರಣ್ಯಾ ಅಧಿಕಾರಿಗಳು ಲಭ್ಯವಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.