ಹೊಸಪೇಟೆ: ಇಲ್ಲಿನ ಹೊರವಲಯದ ಕಾರಿಗನೂರಿನ ವಾಲ್ಮೀಕಿ ನಗರದ ಸೆಂಟ್ರಲ್ ಆಸ್ಪತ್ರೆ ಸಮೀಪ ಬುಧವಾರ ಎರಡು ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಚಾಲಕ ರಾಮಪ್ಪ (32) ಮೃತಪಟ್ಟಿದ್ದಾರೆ.
‘ಬಳ್ಳಾರಿ ಕಡೆಯಿಂದ ಬರುತ್ತಿದ್ದ ಲಾರಿಯು ಕಾರಿಗನೂರಿನಿಂದ ರಾಮಪ್ಪ ಓಡಿಸಿಕೊಂಡು ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ರಾಮಪ್ಪ ಹಾಗೂ ಆಂಧ್ರ ಲಾರಿ ಚಾಲಕ ನಾಗರಾಜ ಅವರನ್ನು ತಕ್ಷಣವೇ ಆಂಬುಲೆನ್ಸ್ನಲ್ಲಿ ಬಳ್ಳಾರಿಯ ವಿಮ್ಸ್ಗೆ ಕಳಿಸಿಕೊಡಲಾಗಿತ್ತು. ಆದರೆ, ರಾಮಪ್ಪ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಎರಡೂ ಲಾರಿಗಳಿಗೆ ಬಹಳ ಹಾನಿಯಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.