ADVERTISEMENT

ಬಾಲಮಂದಿರದಿಂದ‌ ಬಾಲಕರು ಪರಾರಿ: ಸೆಕ್ಯುರಿಟಿ ಗಾರ್ಡ್ ಮೇಲೆ‌ ಹಲ್ಲೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 6:01 IST
Last Updated 20 ಜನವರಿ 2021, 6:01 IST

ಬಳ್ಳಾರಿ: ಬಾಲಮಂದಿರದಲ್ಲಿದ್ದ ಇಬ್ಬರು ಬಾಲಕರು ಅಲ್ಲಿನ ಸೆಕ್ಯುರಿಟಿ ಗಾರ್ಡ್ ಮೇಲೆ‌‌ ಮಂಗಳವಾರ ಮಧ್ಯರಾತ್ರಿ ಹಲ್ಲೆ ನಡೆಸಿ, ಅವರ ಬಳಿ ಇದ್ದ‌ ಹಣವನ್ನೂ ದೋಚಿ‌ ಪರಾರಿಯಾಗಿದ್ದಾರೆ.

ಮಧ್ಯರಾತ್ರಿ ಗಲಾಟೆ ಮಾಡುತ್ತಿದ್ದ‌ ಬಾಲಕರಿಗೆ ಎಚ್ಚರಿಕೆ ನೀಡಲು ಗಾರ್ಡ್ ರೆಹಮಾನ್ ಬಾಷಾ ಕೊಠಡಿಯೊಳಕ್ಕೆ ಹೋದಾಗ ಅವರು‌ ರಾಡ್ ನಿಂದ ಹಲ್ಲೆ ನಡೆಸಿದರು.‌ಅವರ ಬಳಿ ಇದ್ದ ₹ 6,010 ಅನ್ನು ದೋಚಿ ಪರಾರಿಯಾದರು.

ನಂತರ‌ ಅವರು‌ ಪೋಷಕರ‌ ಬಳಿಗೂ ಹೋಗಿಲ್ಲ ಎಂಬ ಮಾಹಿತಿ ಸಂಗ್ರಹಿಸಿರುವ ಕೌಲ್ ಜಾರ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.