ADVERTISEMENT

ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ನಾಮನಿರ್ದೇಶನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 12:10 IST
Last Updated 11 ಡಿಸೆಂಬರ್ 2019, 12:10 IST

ಹೊಸಪೇಟೆ: ರಾಜ್ಯ ಸರ್ಕಾರವು ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಪರಿಷತ್ತಿಗೆ (ಸಿಂಡಿಕೇಟ್) ಎಂಟು ಜನರನ್ನು ಮೂರು ವರ್ಷದ ಅವಧಿಗೆ ನಾಮನಿರ್ದೇಶನ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ.

ಪ್ರೊ. ಎಚ್‌.ಎಸ್‌. ರಘುನಾಥ, ಎಚ್‌.ಎಂ. ಚನ್ನಪ್ಪಗೋಳ, ಪ್ರೊ. ಜಿ.ಸಿ. ರಾಜಣ್ಣ (ಸಾಮಾನ್ಯ ವರ್ಗ), ನಯನಾ (ಮಹಿಳೆ), ಪ್ರಶಾಂತ್‌ ಭೀಮಯ್ಯ (ಹಿಂದುಳಿದ ವರ್ಗ), ಜೈಭೀಮ್‌ (ಪರಿಶಿಷ್ಟ ಜಾತಿ), ವೈ.ಎಂ. ಭಜಂತ್ರಿ (ಪರಿಶಿಷ್ಟ ಪಂಗಡ), ಸಮಿವುಲ್ಲಾ ಖಾನ್‌ (ಅಲ್ಪಸಂಖ್ಯಾತ) ನೇಮಕಗೊಂಡವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT