ADVERTISEMENT

ಬೆಂಕಿಗೆ ₹5 ಲಕ್ಷ ಮೌಲ್ಯದ ಈರುಳ್ಳಿ ನಾಶ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 12:12 IST
Last Updated 5 ಏಪ್ರಿಲ್ 2022, 12:12 IST
ಬೆಂಕಿಗೆ ಈರುಳ್ಳಿ ಸುಟ್ಟು ಹೋಗಿರುವುದು
ಬೆಂಕಿಗೆ ಈರುಳ್ಳಿ ಸುಟ್ಟು ಹೋಗಿರುವುದು   

ಹೊಸಪೇಟೆ (ವಿಜಯನಗರ): ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ₹5 ಲಕ್ಷ ಮೌಲ್ಯದ ಈರುಳ್ಳಿ ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ಗಾದಿಗನೂರಿನಲ್ಲಿ ಸೋಮವಾರ ನಡೆದಿದೆ.

ಗ್ರಾಮದ ರೈತ ರುದ್ರಪ್ಪ ಎಂಬುವರು ಮೂರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಬೆಂಬಲ ಬೆಲೆ ಇಲ್ಲದ ಕಾರಣ ಶೆಡ್‌ನಲ್ಲಿ ದಾಸ್ತಾನು ಮಾಡಿ ಇಟ್ಟಿದ್ದರು. ಸೋಮವಾರ ಈರುಳ್ಳಿ ದಾಸ್ತಾನಿಗೆ ಬೆಂಕಿ ತಗುಲಿ ಸುಟ್ಟು ಹೋಗಿದೆ.

ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಅಷ್ಟೊತ್ತಿಗೆ ದಾಸ್ತಾನು ಮಾಡಲಾಗಿದ್ದ 500 ಚೀಲ ಈರುಳ್ಳಿ ಪೈಕಿ ಬಹುತೇಕ ಸುಟ್ಟು ಹೋಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.