ADVERTISEMENT

ಪಿತೃಪಕ್ಷ; ಹಂಪಿಯಲ್ಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 10:21 IST
Last Updated 9 ಸೆಪ್ಟೆಂಬರ್ 2020, 10:21 IST
ಪಿತೃ ಪಕ್ಷದ ನಿಮಿತ್ತ ತಾಲ್ಲೂಕಿನ ಹಂಪಿ ತುಂಗಭದ್ರಾ ನದಿ ತಟದ ಮಂಟಪದಲ್ಲಿ ಬುಧವಾರ ಪೂಜಾ ಕಾರ್ಯ ನೆರವೇರಿದವು 
ಪಿತೃ ಪಕ್ಷದ ನಿಮಿತ್ತ ತಾಲ್ಲೂಕಿನ ಹಂಪಿ ತುಂಗಭದ್ರಾ ನದಿ ತಟದ ಮಂಟಪದಲ್ಲಿ ಬುಧವಾರ ಪೂಜಾ ಕಾರ್ಯ ನೆರವೇರಿದವು    

ಹೊಸಪೇಟೆ: ಪಿತೃ ಪಕ್ಷದ ನಿಮಿತ್ತ ತಾಲ್ಲೂಕಿನ ಹಂಪಿ ತುಂಗಭದ್ರಾ ನದಿ ತಟದಲ್ಲಿ ಬುಧವಾರ ನೂರಾರು ಜನ ಪಿತೃಗಳ ಆತ್ಮಶಾಂತಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.

ತುಂಗಭದ್ರಾ ನದಿಯಲ್ಲಿ ಮಿಂದೆದ್ದು, ವಸಿಷ್ಠ ಆಶ್ರಮದ ಮಂಟಪಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹಿರಿಯರ ಸ್ಮರಣೆ ಮಾಡಿದರು.

‘ಹಿರಿಯರ ಸದ್ಗತಿಗಾಗಿ ನೆರವೇರಿಸುವ ವಿಶೇಷ ಪೂಜೆ ಪಿತೃಪಕ್ಷದಲ್ಲಿ ನೆರವೇರಿಸಲಾಗುತ್ತದೆ. ಸಾಕಿ ಸಲುಹಿದ ಹಿರಿಯರು, ಎಲ್ಲ ಪ್ರಾಣಿ, ಪಕ್ಷಿಗಳ ಒಳಿತಿಗಾಗಿ ಈ ಪೂಜೆ ನೆರವೇರಿಸಲಾಗುತ್ತದೆ. ಪ್ರತಿ ವರ್ಷ ವಿವಿಧ ಭಾಗಗಳಿಂದ ನೂರಾರು ಜನ ಹಂಪಿಗೆ ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಪುರೋಹಿತ ಮೋಹನ್‌ ಚಿಕ್ಕಭಟ್‌ ಜೋಶಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.