ADVERTISEMENT

ಸಿರುಗುಪ್ಪ: ಕೇಂದ್ರ ಕಾರ್ಮಿಕ ನೀತಿ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮೇ 2025, 15:16 IST
Last Updated 21 ಮೇ 2025, 15:16 IST
ಕೇಂದ್ರ ಸರ್ಕಾರದ ಕಾನೂನು ನೀತಿಯನ್ನು ವಿರೋಧಿಸಿ ಸಿರಗುಪ್ಪ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಿ.ಐ.ಟಿ.ಯು ತಾಲ್ಲೂಕು ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು
ಕೇಂದ್ರ ಸರ್ಕಾರದ ಕಾನೂನು ನೀತಿಯನ್ನು ವಿರೋಧಿಸಿ ಸಿರಗುಪ್ಪ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಿ.ಐ.ಟಿ.ಯು ತಾಲ್ಲೂಕು ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು   

ಸಿರುಗುಪ್ಪ: ಕೇಂದ್ರ ಸರ್ಕಾರದ ಕಾನೂನು ನೀತಿಯನ್ನು ವಿರೋಧಿಸಿ ನಗರದ ಸಿ.ಐ.ಟಿ.ಯು ತಾಲ್ಲೂಕು ಸಮಿತಿ ವತಿಯಿಂದ ಮಹಾತ್ಮ ಗಾಂಧಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಸಿ.ಐ.ಟಿ.ಯು ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್. ತಿಪ್ಪಯ್ಯ ಮಾತನಾಡಿ, ‘ಕೇಂದ್ರ ಸರ್ಕಾರವು ಈ ಹಿಂದೆ ಇದ್ದ 44 ಕಾರ್ಮಿಕ ಕಾನೂನುಗಳನ್ನು ನಾಲ್ಕು ವಿಭಾಗಗಳಾಗಿ ಪರಿವರ್ತಿಸಿರುವುದು ಕಾರ್ಮಿಕರ ವಿರೋಧಿ ನೀತಿಯಾಗಿದೆ. ಹಳೆಯ ಕಾನೂನುಗಳನ್ನು ಹಾಗೆಯೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ಮಹಾತ್ಮ ಗಾಂಧಿ ವೃತ್ತದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕರ ನಾಲ್ಕು ಕಾನೂನು ವಿಭಾಗಗಳ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

ADVERTISEMENT

ಸಿ.ಐ.ಟಿ.ಯು ಜಿಲ್ಲಾ ಸಹ ಕಾರ್ಯದರ್ಶಿ ಬಿ. ಸುರೇಶ, ಜಿಲ್ಲಾ ಖಜಾಂಚಿ ಬಿ. ಉಮಾದೇವಿ, ತಾಲ್ಲೂಕು ಸಂಚಾಲಕರಾದ ಎಚ್.ಬಿ. ಓಬಳೇಶಪ್ಪ, ಎಂ. ಲಕ್ಷ್ಮಣ, ಎಂ.ಹುಲೆಪ್ಪ, ಲತೀಫ್ ಖಾಜ, ಆರ್. ಮಲ್ಲಯ್ಯ ರಮೇಶ, ಖಾಜಾ ಬೀ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.