ADVERTISEMENT

ತುಂಗಭದ್ರಾ ಸಂಘಕ್ಕೆ ರಾಮಣ್ಣ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 9:54 IST
Last Updated 11 ಜುಲೈ 2019, 9:54 IST
ಡಿ.ಎಚ್. ರಾಮಣ್ಣ
ಡಿ.ಎಚ್. ರಾಮಣ್ಣ   

ಹೊಸಪೇಟೆ: ಇಲ್ಲಿನ ತುಂಗಭದ್ರಾ ವ್ಯವಸಾಯ ಉಪಕರಣಗಳ ಉತ್ಪಾದನಾ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಎಚ್‌. ರಾಮಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕಾಗಿ ಬುಧವಾರ ನಡೆದ ಚುನಾವಣೆಗೆ ರಾಮಣ್ಣ ಹೊರತುಪಡಿಸಿದರೆ ಬೇರೆ ಯಾರು ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಚುನಾವಣಾಧಿಕಾರಿ ರಾಮನ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಅಯ್ಯಾಳಿ ಶಂಕ್ರಪ್ಪ, ಕೆ.ಜಿ. ಕುದಹರಗೌಡ, ಬಿ.ಕೆ. ನಾಗರಾಜರಾವ್‌, ಬಿ.ಜಿ. ತಿರುಮಲ, ಕೆ.ಎಂ. ಗಂಗಾಧರ, ಎ. ನಾರಾಯಣ ಸಿಂಗ್‌, ಕೆ. ರಾಮಪ್ಪ, ಕೆ. ಬಸವರಾಜ, ಬಿ. ಪ್ರಕಾಶಬಾಬು, ಕಪ್ಲಿ ಮಾರುತಿ, ಕೆ. ತಿಪ್ಪೇಸ್ವಾಮಿ, ಸುಮಂಗಲ, ಡಿ. ತಾಯಮ್ಮ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.