ಹೊಸಪೇಟೆ (ವಿಜಯನಗರ): ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳದ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನವೀನ್ ಕುಮಾರ್ ಜೆ.ಎಲ್. ಆಯ್ಕೆಯಾದರು.
ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಮಹಾಮಂಡಳದ ಸಭೆಯಲ್ಲಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅದರ ವಿವರ ಇಂತಿದೆ.
ವಿವೇಕಾನಂದ ಕೂಡ್ಲಿಗಿ (ಕಾರ್ಯಾಧ್ಯಕ್ಷ), ಸವಿತಾ, ರೋಷನ್ (ಉಪಾಧ್ಯಕ್ಷರು), ಚಿಗಟೇರಿ ಕೊಟ್ರೇಶಿ (ಕಾರ್ಯದರ್ಶಿ), ಹಸೀನಾ ಬಾನು (ಸಹ ಕಾರ್ಯದರ್ಶಿ), ಆಲಂ ಬಾಷ (ಸಂಘಟನಾ ಕಾರ್ಯದರ್ಶಿ), ರಾಜಭಕ್ಷಿ (ಜಿಲ್ಲಾ ಖಜಾಂಚಿ), ದೇವರಾಜ್ (ಸಹ ಖಜಾಂಚಿ), ಹರಿಶ್ಚಂದ್ರ ನಾಯ್ಕ, ಪ್ರಕಾಶ್ ಉಪ್ಪಾರ, ದೇವರಾಜ್, ಕೆ.ಎಸ್.ನಾಗರಾಜ್ ಗೌಡ, ವಿರೇಶ್, ಜೋಗಿ ರತ್ನಮ್ಮ, ಬಸಮ್ಮ, ಹುಲುಗಪ್ಪ, ನಾಗರಾಜ್, ಗಿರೀಶ್ ನಾಯ್ಕ, ಹೇಮಾವತಿ, ಉಮೇಶ್ (ಕಾರ್ಯಕಾರಿಣಿ ಸದಸ್ಯರು) ಆಯ್ಕೆಯಾದರು. ಸಭೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಭಾಸ್ಕರ್ ಅರಸ್, ಕಾರ್ಯದರ್ಶಿ ರಾಜಣ್ಣ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.