ADVERTISEMENT

ಸಮಯಪ್ರಜ್ಞೆಗೆ ಉಳಿಯಿತು ಜೀವ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 16:14 IST
Last Updated 21 ಜನವರಿ 2019, 16:14 IST
ಸಿ. ಹರೀಶ್‌
ಸಿ. ಹರೀಶ್‌   

ಹೊಸಪೇಟೆ: ರೈಲ್ವೆ ಭದ್ರತಾ ಸಿಬ್ಬಂದಿ ಸಿ. ಹರೀಶ್‌ ಅವರ ಸಮಯಪ್ರಜ್ಞೆಯಿಂದ ಪ್ರಯಾಣಿಕರೊಬ್ಬರ ಜೀವ ಉಳಿದಿದೆ.

‘ಭಾನುವಾರ ನಗರದ ರೈಲು ನಿಲ್ದಾಣದಿಂದ ಬೆಂಗಳೂರು ಪ್ಯಾಸೆಂಜರ್‌ ರೈಲು (56910) ಹೊರಡುತ್ತಿತ್ತು. ಈ ವೇಳೆ ಗೌರವ್‌ (55) ಎಂಬ ಪ್ರಯಾಣಿಕರೊಬ್ಬರು ಲಗೇಜ್‌ನೊಂದಿಗೆ ರೈಲು ಏರಲು ಪ್ರಯತ್ನಿಸಿ, ಆಯಾ ತಪ್ಪಿ ಬಿದ್ದಿದ್ದಾರೆ. ಅವರ ಕಾಲುಗಳೆರಡು ರೈಲಿನಲ್ಲಿದ್ದರೆ, ಮಿಕ್ಕುಳಿದ ದೇಹ ಹೊರಗೆ ನೇತಾಡುತ್ತ ರೈಲಿನ ಅಡಿಯಲ್ಲಿ ಹೋಗುತ್ತಿತ್ತು. ಅದನ್ನು ಗಮನಿಸಿದ ಹರೀಶ್‌ ತಕ್ಷಣವೇ ಓಡಿ ಹೋಗಿ ಅವರನ್ನು ರಕ್ಷಿಸಿದ್ದಾರೆ’ ಎಂದು ನಿಲ್ದಾಣದ ಅಧಿಕಾರಿ ಉಮರ್‌ ಬಾನಿ ತಿಳಿಸಿದ್ದಾರೆ.

‘ಹರೀಶ್‌ ಅವರ ಸಮಯ ಪ್ರಜ್ಞೆಯಿಂದ ವ್ಯಕ್ತಿಯೊಬ್ಬರ ಜೀವ ಉಳಿದಿದೆ. ಅವರಿಗೆ ಇಲಾಖೆಯಿಂದ ಬಹುಮಾನ ನೀಡಲಾಗುವುದು’ ಎಂದು ಹೇಳಿದ್ದಾರೆ. ಹರೀಶ್‌ ಅವರು ಜೀವ ಉಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರು ಮೆಚ್ಚುಗೆಯ ಸುರಿಮಳೆ ಹರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.