ADVERTISEMENT

ವಿಶ್ವ ಕಾರ್ಮಿಕ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 15:37 IST
Last Updated 2 ಮೇ 2019, 15:37 IST
ಗೆಳೆಯರ ಬಳಗದಿಂದ ವಿಶ್ವ ಕಾರ್ಮಿಕ ದಿನ ಆಚರಿಸಲಾಯಿತು
ಗೆಳೆಯರ ಬಳಗದಿಂದ ವಿಶ್ವ ಕಾರ್ಮಿಕ ದಿನ ಆಚರಿಸಲಾಯಿತು   

ಹೊಸಪೇಟೆ: ಇಲ್ಲಿನ ಸರ್ದಾರ್‌ ಪಟೇಲ್‌ ಶಾಲೆಯ ಗೆಳೆಯರ ಬಳಗದಿಂದ ಗುರುವಾರ ವಿಶ್ವ ಕಾರ್ಮಿಕರ ದಿನ ಆಚರಿಸಲಾಯಿತು.

‘ಹಿಂದೆ ಕೆಲಸದ ಅವಧಿಯೇ ಇರಲಿಲ್ಲ. ಭೂಮಾಲೀಕರು, ಬಂಡವಾಳಷಾಹಿಗಳು ಮನಬಂದಂತೆ ಕೂಲಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು. ಆದರೆ, ಎಡಪಂಥೀಯ ಹಾಗೂ ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ಶೋಷಣೆಗೆ ಕಡಿವಾಣ ಬಿದ್ದಿದೆ’ ಬಳಗದ ಸದಸ್ಯ ಈಡಿಗರ ಮಂಜುನಾಥ ತಿಳಿಸಿದರು.

ಇದೇ ವೇಳೆ ಬಳಗದ ಹತ್ತು ಜನ ಸದಸ್ಯರು ರಕ್ತದಾನ ಮಾಡಿದರು. ಸ್ಲಂವೆಂಕಟೇಶ್, ತಿರುಮಲ, ರಾಘು, ಅಂಜಿ, ಅಶೋಕ್ ಲಿಂಗಯ್ಯ, ಇಸ್ಮಾಯಿಲ್, ಮಾಬು, ಕಲಂದರ್, ಮೋಹನ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.