ADVERTISEMENT

‘ಸಂಘದಿಂದ ಸಮಾಜಮುಖಿ ಕಾರ್ಯ’

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 19:49 IST
Last Updated 25 ಜೂನ್ 2019, 19:49 IST
ಪೂರ್ಣಿಮಾ ಸುಗ್ಗರಾಜು ಅವರನ್ನು ಡಾ.ರಾಘವೇಂದ್ರ ಜೋಶಿ ಅಭಿನಂದಿಸಿದರು. ಸಂಘದ ಪದಾಧಿಕಾರಿಗಳಾದ ರಂಗಧಾಮಯ್ಯ, ರವಿಶಂಕರ್‌ ಇದ್ದಾರೆ.
ಪೂರ್ಣಿಮಾ ಸುಗ್ಗರಾಜು ಅವರನ್ನು ಡಾ.ರಾಘವೇಂದ್ರ ಜೋಶಿ ಅಭಿನಂದಿಸಿದರು. ಸಂಘದ ಪದಾಧಿಕಾರಿಗಳಾದ ರಂಗಧಾಮಯ್ಯ, ರವಿಶಂಕರ್‌ ಇದ್ದಾರೆ.   

ನೆಲಮಂಗಲ: ಸುಭಾಷ್‌ನಗರ ಕಾಯಂ ನಿವಾಸಿಗಳ ಸಂಘದ ವತಿಯಿಂದ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ದೇಣಿಗೆ, ಬಡ ವಿದ್ಯಾರ್ಥಿಗಳಿಗೆ ನೆರವು... ಹೀಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಧ್ಯಕ್ಷ ಡಾ.ರಾಘವೇಂದ್ರ ಜೋಶಿ ತಿಳಿಸಿದರು.

ಪಟ್ಟಣದ ಸುಭಾಷ್‌ನಗರ ಕಾಯಂ ನಿವಾಸಿಗಳ ಸಂಘ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯೆ ಪೂರ್ಣಿಮಾ ಸುಗ್ಗರಾಜು ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಪೂರ್ಣಿಮಾ ಸುಗ್ಗರಾಜು ಮಾತ ನಾಡಿ, ‘ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಹಾಗೂ ದಾನಿಗಳು, ಇನ್ನಿತರ ಮೂಲ ಗಳಿಂದ ಹಣ ತಂದು ವಾರ್ಡ್‌ನ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.

ADVERTISEMENT

ಬಿಜೆಪಿ ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷ ರಂಗಧಾಮಯ್ಯ, ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜು, ಖಜಾಂಚಿ ಎನ್‌.ಎಸ್‌. ಸುಂದರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.