ADVERTISEMENT

‘ಬೆಲೆ ಏರಿಕೆ ಯುಪಿಎ ಸಾಧನೆ’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 11:09 IST
Last Updated 18 ಮಾರ್ಚ್ 2014, 11:09 IST

ಚನ್ನಪಟ್ಟಣ:  ದಿನನಿತ್ಯದ ಅಗತ್ಯ ವಸ್ತು­ಗಳ ಬೆಲೆ ಏರಿಸಿದ್ದೇ ಯುಪಿಎ ಸರ್ಕಾ­ರದ ಸಾಧನೆಯಾಗಿದೆ ಎಂದು ಯಲ­ಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಟೀಕಿಸಿದರು.
ಪಟ್ಟಣದ ವಿಶ್ವಪ್ರೇಮಿ ಸಮಾರಂಭ ಭವನ­ದಲ್ಲಿ ಸೋಮವಾರ ನಡೆದ
ತಾಲ್ಲೂಕು ಬಿಜೆಪಿ ಬೂತ್ ಮಟ್ಟದ ಕಾರ್ಯ­ಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾ­ರದ ಸಚಿವರು ಮಾಡಿದ ಹಗರಣಗಳು ಜಾಗತಿಕ ಮಟ್ಟದಲ್ಲಿ ದೇಶ ತಲೆತಗ್ಗಿಸುವಂತೆ ಮಾಡಿದೆ ಎಂದು ಹರಿಹಾಯ್ದರು.

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿ­ರಾಜು­ಗೌಡ ಮಾತನಾಡಿ, ಕ್ಷೇತ್ರದಲ್ಲಿ ಹಿಂದೆ ಗೆಲುವು ಸಾಧಿಸಿದವರು ಕ್ಷೇತ್ರದ ಅಭಿ­ವೃದ್ದಿ­ಗಾಗಿ ಕೇಂದ್ರದಿಂದ ಬಂದ ಅನು­ದಾನವನ್ನು ಬಳಸಿಕೊಳ್ಳಲು ವಿಫಲರಾಗಿ­ದ್ದಾರೆ ಎಂದು ಟೀಕಿಸಿದರು.

ವಿರೋಧ ಪಕ್ಷದವರು ತಮ್ಮನ್ನು ಡಮ್ಮಿ ಅಭ್ಯರ್ಥಿ ಎಂದು ಬಿಂಬಿಸಲು ಹೊರಟಿದ್ದು, ಚುನಾವಣೆಯಲ್ಲಿ ಯಾರು ಡಮ್ಮಿ, ಯಾರು ಬಲಾಢ್ಯರು ಎಂಬುದು ತಿಳಿಯಲಿದೆ. ಈ ಬಾರಿ ಬಿಜೆಪಿ ಗೆಲುವು ಖಚಿತ ಎಂದು ಮುನಿರಾಜ ಗೌಡ ವಿಶ್ವಾಸ ವ್ಯಕ್ತಪಡಿಸಿ ದರು. ವಿಧಾನಪರಿಷತ್ ಸದಸ್ಯ ರಾಮ ಚಂದ್ರೇ­ಗೌಡ ಒಕ್ಕಲಿಗರ ಸಂಘದ ನಿರ್ದೇ ಶಕ ಜಾಲಹಳ್ಳಿ ರವಿ, ಮುರಳಿ ಮನೋಹರ್, ಪರಿಚಿತರಾಜೇ ಅರಸ್, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗರಾಜು, ಜಿಲ್ಲಾ ಕಾರ್ಯದರ್ಶಿ ರವಿಕುಮಾರ್‌ಗೌಡ ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.