ADVERTISEMENT

ದೊಡ್ಡಬಳ್ಳಾಪುರ | ರಕ್ತದಲ್ಲಿ ಪತ್ರ ಬರೆದು ದೇವರ ಹುಂಡಿಗೆ ಹಾಕಿದ ಪ್ರೇಮಿ

ಘಾಟಿ ಕ್ಷೇತ್ರ: ₹85 ಲಕ್ಷ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 6:04 IST
Last Updated 10 ಜನವರಿ 2023, 6:04 IST
ರಕ್ತದಲ್ಲಿ ಬರೆದಿರುವ ಪ್ರೇಮ ನಿವೇದನಾ ಪತ್ರ
ರಕ್ತದಲ್ಲಿ ಬರೆದಿರುವ ಪ್ರೇಮ ನಿವೇದನಾ ಪತ್ರ   

ತೂಬಗೆರೆ (ದೊಡ್ಡಬಳ್ಳಾಪುರ): ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಹುಂಡಿಯಲ್ಲಿನ ಹಣ ಎಣಿಕೆ ವೇಳೆ ಪ್ರೇಮಿಯೊಬ್ಬ ರಕ್ತದಲ್ಲಿ ಬರೆದಿರುವ ಪ್ರೇಮ ಪತ್ರ ದೊರೆತಿದೆ.

ತಾನು ಪ್ರೀತಿಸುತ್ತಿರುವ ಹುಡುಗಿಯೇ ಜೋಡಿಯಾಗುವಂತೆ ದೇವರಿಗೆ ಪತ್ರದ ಮೂಲಕ ಹರಕೆ ಮಾಡಿಕೊಂಡಿದ್ದಾನೆ. ಪ್ರೇಮಿಗಳಿಬ್ಬರು ಜೋಡಿಯಾಗಿ ಇರುವ ಫೋಟೊ ಇದ್ದು, ಅದರ ಹಿಂಬದಿಯಲ್ಲಿ ಪ್ರೇಮಿ ನಿವೇದಿಸಿಕೊಂಡಿರುವ ಒಕ್ಕಣೆ ಇದೆ.

ರಥೋತ್ಸವದ ನಂತರ ನಡೆದ ಘಾಟಿ ದೇಗುಲದಲ್ಲಿ ಸೋಮವಾರ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು ₹85 ಲಕ್ಷ ಸಂಗ್ರಹವಾಗಿದೆ. ಇದರೊಂದಿಗೆ ₹52,350 ಮೌಲ್ಯದ 11 ಗ್ರಾಂ 900 ಮಿಲಿ ಚಿನ್ನ, ₹72,100 ಮೌಲ್ಯದ 5 ಕೆ.ಜಿ 50 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.

ADVERTISEMENT

ಎಣಿಕೆ ವೇಳೆ ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜೆ.ಜೆ. ಹೇಮಾವತಿ, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಡಿ. ನಾಗರಾಜ್, ಪ್ರಧಾನ ಅರ್ಚಕ ಎಸ್.ಎನ್. ಸುಬ್ಬಕೃಷ್ಣಶಾಸ್ತ್ರಿ, ದೇವಾಲಯದ ಅಧೀಕ್ಷಕ ರಘು ಹುಚ್ಚಪ್ಪ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.