ADVERTISEMENT

ಆಧಾರ್ ಮಾಡಿಸಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಅಪಘಾತದಲ್ಲಿ ದುರ್ಮರಣ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 11:32 IST
Last Updated 17 ಜೂನ್ 2019, 11:32 IST
   

ದೇವನಹಳ್ಳಿ:ಬಸ್ಮತ್ತುಆಟೋ ಮುಖಾಮುಖಿ ಡಿಕ್ಕಿಯಾಗಿ ಆಟೋದಲ್ಲಿದ್ದ ನಾಲ್ವರು ಸೋಮವಾರದುರ್ಮರಣಕ್ಕೀಡಾಗಿದ್ದಾರೆ.

ಹಸೀನಾ( 35 ) ಜೋಯಾ( 5 ) ಶಾಜೀಯಾ( 08 ) ಸಾನಿಯಾ( 17 ) ಮೃತ ದುರ್ದೈವಿಗಳು. ಇವರುಹೊಸಕೋಟೆ ತಾಲೂಕಿನ ಸೂಲಿಬೆಲೆಯಗಿಡ್ಡಪನಹಳ್ಳಿಯವರುಎಂದು ತಿಳಿದು ಬಂದಿದೆ.

ಗಾಯಗೊಂಡ 8ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ADVERTISEMENT

ಮಕ್ಕಳು ಸೇರಿದಂತೆ 12ಜನ ಕುಟುಂಬಸ್ಥರುದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯಿರುವಡಿಸಿ ಕಚೇರಿಯಲ್ಲಿ ಆಧಾರ್‌ಗೆ ಪೊಟೋ ತೆಗೆಸಲು ಹೋಗುತ್ತಿದ್ದವೇಳೆ ದುರ್ಘಟನೆ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.