ADVERTISEMENT

ರೌಡಿಶೀಟರ್‌ ಅಪಹರಿಸಿ ಹಲ್ಲೆ

ಮತ್ತೊಬ್ಬ ರೌಡಿಶೀಟರ್‌ನಿಂದ ಕೃತ್ಯ* ಗಾಯಾಳು ಸ್ಥಿತಿ ಚಿಂತಾಜನಕ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 21:11 IST
Last Updated 8 ಜನವರಿ 2026, 21:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹುಸ್ಕೂರು ಬಳಿ ರೌಡಿಶೀಟರ್‌ವೊಬ್ಬ ಮತ್ತೊಬ್ಬ ರೌಡಿಶೀಟರ್‌ನನ್ನು ಅಪಹರಿಸಿ ಹಲ್ಲೆ ನಡೆಸಿದ್ದಾನೆ. 

ADVERTISEMENT

ಕಾರ್ತಿಕ್‌ ಅಲಿಯಾಸ್‌ ಜೆ.ಕೆ ಸಲಗ ಎಂಬ ರೌಡಿಶೀಟರ್‌ನನ್ನು ಗಂಗಾ ಎಂಬ ಮತ್ತೊಬ್ಬ ರೌಡಿಶೀಟರ್‌ ತನ್ನ ತಂಡದೊಂದಿಗೆ ಹುಸ್ಕೂರು ಬಳಿ ಅಪಹರಿಸಿ ತಮಿಳುನಾಡಿನ ಹೊಸೂರಿಗೆ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. 

ನಂತರ ಹುಸ್ಕೂರು ರಸ್ತೆ ಬದಿಯಲ್ಲಿ ಬಿಟ್ಟು ವಿಷಯವನ್ನು ಕಾರ್ತಿಕ್‌ ಪತ್ನಿಗೆ ಕರೆ ಮಾಡಿ ತಿಳಿಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ಕಾರ್ತಿಕ್‌ನನ್ನು ಸ್ಥಿತಿ ಚಿಂತಾಜನಕವಾಗಿದ್ದು ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೊಲೆ ಪ್ರಕರಣವೊಂದರಲ್ಲಿ ಕಾಲಿಗೆ ಗುಂಡೇಟು ಬಿದ್ದ ನಂತರ ಜೈಲು ಸೇರಿದ್ದ ಕಾರ್ತಿಕ ಇತ್ತೀಚಿಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.