ADVERTISEMENT

ಸರ್ಕಾರಿ ಕಾಲೇಜು ಗೋಡೆಗೆ ಬಿಜೆಪಿ ಬ್ಯಾನರ್: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:50 IST
Last Updated 7 ಫೆಬ್ರುವರಿ 2023, 4:50 IST
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಡೆಗೋಡೆಗೆ ಬಿಜೆಪಿ ಸರ್ಕಾರದ ಸಾಧನೆಗಳು ತಿಳಿಸುವ ಡಿಜಿಟಲ್ ಬ್ಯಾನರ್ ಅಳವಡಿಸಿರುವುದು
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಡೆಗೋಡೆಗೆ ಬಿಜೆಪಿ ಸರ್ಕಾರದ ಸಾಧನೆಗಳು ತಿಳಿಸುವ ಡಿಜಿಟಲ್ ಬ್ಯಾನರ್ ಅಳವಡಿಸಿರುವುದು   

ವಿಜಯಪುರ(ದೇವನಹಳ್ಳಿ): ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸಲು ಗೋಡೆಗಳ ಮೇಲೆ ಬ್ಯಾನರ್ ಅಳವಡಿಸುವ ಅಭಿಯಾನ ನಡೆಯಿತು.

ಮಾಜಿ ಶಾಸಕ ಜಿ.ಚಂದ್ರಣ್ಣ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುನೀಲ್ ಸುಂದರೇಶ್, ಡಿ.ಎಂ.ಮುನೀಂದ್ರ, ರವಿಕುಮಾರ್, ರಾಮು ಭಗವಾನ್, ಭಾಗವಹಿಸಿದ್ದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗೋಡೆ ಮೇಲೆ ಬ್ಯಾನರ್ ಅಂಟಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಯಿತು. ಸರ್ಕಾರಿ ಸ್ವತ್ತನ್ನು ಬಿಜೆಪಿ ಪಕ್ಷದ ಪ್ರಚಾರಕ್ಕೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಕೂಡಲೇ ಬ್ಯಾನರ್ ತೆರವುಗೊಳಿಸಬೇಕು. ಕಾಲೇಜು ಆವರಣ ರಾಜಕೀಯ ಪ್ರಚಾರಕ್ಕೆ ವೇದಿಕೆ ಆಗಬಾರದೆಂದು ಆಕ್ಷೇಪ ವ್ಯಕ್ತವಾಯಿತು.

ADVERTISEMENT

‘ನಿಮ್ಮ ಸರ್ಕಾರದ ಕಾರ್ಯಕ್ರಮಗಳು ಕೇವಲ ಬ್ಯಾನರ್‌ಗಳಲ್ಲಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರನ್ನು ಕೇವಲ ಮತಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದೀರಿ.

ಯಾವುದೇ ಪ್ರಯೋಜನ ಮಾಡಿ ಕೊಟ್ಟಿಲ್ಲ. ಏಕೆ ಜನರಿಗೆ ಸುಳ್ಳು ಮಾಹಿತಿ ನೀಡುತ್ತೀರಿ’ ಎಂದು ಯುವಕನೊಬ್ಬ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.