ADVERTISEMENT

ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಾಟ: ಬಂಧನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 15:26 IST
Last Updated 12 ಡಿಸೆಂಬರ್ 2019, 15:26 IST

ದೊಡ್ಡಬಳ್ಳಾಪುರ: ಜಮೀನಿಗೆ ನಕಲಿ ದಾಖಲೆ, ಮಾಲೀಕರನ್ನು ಸೃಷ್ಟಿಸಿ ಮಾರಾಟ ಮಾಡಿರುವ ಆರೋಪದ ಮೇಲೆ ಸಾಸಲು ಹೋಬಳಿಯ ಸುತ್ತಹಳ್ಳಿ ಗ್ರಾಮದ ಚಂದ್ರಪ್ಪ, ಕಸಬಾ ಹೋಬಳಿಯ ಗಡ್ಡಂಬಚ್ಚಹಳ್ಳಿ ಗ್ರಾಮದ ಚನ್ನಕೇಶ್ವ, ಚನ್ನಪಟ್ಟಣ್ಣ ತಾಲ್ಲೂಕಿನ ಮಾದಾಪುರ ಗ್ರಾಮದ ಶಿವಣ್ಣ, ಗೂಳ್ಯ ಗ್ರಾಮದ ಮಂಜುನಾಥ್‌ ಎಂಬುವವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಕೆ.ವೆಂಕಟೇಶ್‌ ತಿಳಿಸಿದ್ದಾರೆ.

ಅವರು ಈ ಬಗ್ಗೆ ಮಾಹಿತಿ ನೀಡಿ, ತಾಲ್ಲೂಕಿನ ರಾಮೇಶ್ವರ ಗ್ರಾಮದ ಸರ್ವೇ ನಂ.142/5ರಲ್ಲಿ ರುದ್ರೇಗೌಡ ಎಂಬುವವರಿಗೆ ಸೇರಿದ್ದ 3.24 ಎಕರೆ ಜಮೀನಿನಲ್ಲಿ 2.12 ಜಮೀನಿಗೆ ನಕಲಿ ದಾಖಲೆ, ನಕಲಿ ಮಾಲೀಕರನ್ನು ಸೃಷ್ಟಿಸಲಾಗಿತ್ತು ಎಂದಿದ್ದಾರೆ.

ರುದ್ರೇಗೌಡ ಅವರ ಪತ್ನಿ ವಾಣಿ ಅವರು ನೀಡಿದ ದೂರಿನ ಮೇರೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಜೀತ್‌, ಡಿವೈಎಸ್‌ಪಿ ಟಿ.ರಂಗಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್ ರಾಘವ ಎಸ್‌.ಗೌಡ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು ಭೂ ಮಾಫಿಯದಲ್ಲಿ ನಿರತರಾಗಿದ್ದ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.