ADVERTISEMENT

ದೇವನಹಳ್ಳಿ |ವಿಜಯಪುರ: ಆಂಜನೇಯಸ್ವಾಮಿ ಭಕ್ತರ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 12:53 IST
Last Updated 20 ಆಗಸ್ಟ್ 2024, 12:53 IST

ವಿಜಯಪುರ(ದೇವನಹಳ್ಳಿ): ಪಟ್ಟಣದ ರೇಣುಕಾ ಎಲ್ಲಮ್ಮ ದೇವಿ ಸರ್ಕಲ್‌ನಲ್ಲಿರುವ ಮೂಡಲ ಆಂಜನೇಯಸ್ವಾಮಿ ಸನ್ನಿಧಿಯಿಂದ ಆ.24ರಂದು ಶ್ರಾವಣ ಮಾಸದ 3ನೇ ಶನಿವಾರದಂದು ಆಂಜನೇಯಸ್ವಾಮಿ ಪಾದಯಾತ್ರಾ ಭಕ್ತರ ಬಳಗದಿಂದ 13ನೇ ವರ್ಷದ ಪಾದಯಾತ್ರೆ ಆಯೋಜನೆ ಮಾಡಲಾಗಿದೆ. ಇಲ್ಲಿಂದ ಹೊರಟು ಆವತಿ ಗೌತಮಗಿರಿ ತಿಮ್ಮರಾಯಸ್ವಾಮಿ ಬೆಟ್ಟಕ್ಕೆ, ವಿಜಯಪುರದ ಎಲ್ಲ ದೇವಾಲಯಗಳ ಭಕ್ತಮಂಡಳಿಯ ಭಕ್ತಾಧಿಗಳಿಂದ ರಾಮಭಜನಾ ಪೂರ್ವಕವಾಗಿ ಪಾದಯಾತ್ರೆ ನಡೆಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.