ADVERTISEMENT

ಮಣ್ಣು ಕುಸಿತ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 20:27 IST
Last Updated 4 ಜುಲೈ 2019, 20:27 IST
ಮೃತ ವ್ಯಕ್ತಿ ಮಂಜುನಾಥ್
ಮೃತ ವ್ಯಕ್ತಿ ಮಂಜುನಾಥ್   

ದಾಬಸ್‌ಪೇಟೆ: ಕಾರ್ಖಾನೆಯ ಸಂಪು ನಿರ್ಮಾಣದ ವೇಳೆ ಮಣ್ಣು ಕುಸಿತ ಉಂಟಾಗಿ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಸೋಂಪುರ ಕೈಗಾರಿಕಾ ಪ್ರದೇಶದ ನಾಲ್ಕನೇ ಹಂತದ ಹೊನ್ನೇನಹಳ್ಳಿ ಗ್ರಾಮದ ಸಮೀಪ ನಡೆದಿದೆ.

ದಾಬಸ್ ಪೇಟೆ ಸಮೀಪದ ಹೊಸನಿಜಗಲ್ ಗ್ರಾಮದ ಮಂಜುನಾಥ್ (33) ಮೃತ ವ್ಯಕ್ತಿ. ಗುರುವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಉಳಿದ ಇಬ್ಬರು ಗಾಯಗೊಂಡಿದ್ದಾರೆ.

ಶಿಲ್ಪ ಮೆಡಿಕೇರ್‌ ಕಾರ್ಖಾನೆ ನಿರ್ಮಾಣ ಸ್ಥಳದಲ್ಲಿ ನೆಲದೊಳಗೆ ದೊಡ್ಡ ನೀರಿನ ಟ್ಯಾಂಕ್ ಕಟ್ಟಲು ಕಂಬಿ ಕೆಲಸ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ADVERTISEMENT

ಈ ಘಟನೆ ಸಂಬಂಧ ಕಾರ್ಮಿಕ ಗುತ್ತಿಗೆದಾರ ವಿನೋದ್, ಕಂಪನಿಯಿಂದ ಗುತ್ತಿಗೆ ಪಡೆದಿರುವ ಜಗದೀಶ್, ಶಿಲ್ಪ ಮೆಡಿಕೇರ್‌ ಜಿಎಂ ಸಂಜಯ್ ಬೊರೆಲ್ ಕೆಲ್ ಮತ್ತು ಕಂಪನಿ ಮಾಲೀಕ ವಿಷ್ಣುಕಾಂತ್ ಬೂಟಾಡಿ ವಿರುದ್ಧ ದಾಬಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.